ಹನಿಟ್ರ್ಯಾಪ್ ಯತ್ನ: ಗೃಹ ಸಚಿವರಿಗೆ ದೂರು ನೀಡಲಿರುವ ಕೆ.ಎನ್. ರಾಜಣ್ಣ ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಕೋಲಾರ: ಕರ್ನಾಟಕ ಸರ್ಕಾರದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹನಿಟ್ರ್ಯಾಪ್ ಯತ್ನದ ಕುರಿತು ಗೃಹ ಸಚಿವರಿಗೆ ದೂರು ಸಲ್ಲಿಸುವ ಉದ್ದೇಶ ಹೊಂದಿದ್ದಾರೆ ಎಂದು ಶನಿವಾರ ಪ್ರಕಟಿಸಿದರು. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, “48 ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನಿಸಲಾಗಿದೆ ಎಂದು ಮಾತ್ರ ನಾನು ಹೇಳಿದ್ದೇನೆ, ನ್ಯಾಯಾಧೀಶರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ನಾನು ಹೇಳಿಲ್ಲ” ಎಂದು ಸ್ಪಷ್ಟಪಡಿಸಿದರು.
ಹನಿಟ್ರ್ಯಾಪ್(Honey Trap) ಎಂದರೇನು?
ಹನಿಟ್ರ್ಯಾಪ್ (Honey Trap) ಎಂಬುದು ರಾಜಕೀಯ ಅಥವಾ ಪ್ರಮುಖ ವ್ಯಕ್ತಿಗಳನ್ನು ಮುಜುಗರಕ್ಕೆ ತಳ್ಳಲು, ಬ್ಲ್ಯಾಕ್ಮೇಲ್ ಮಾಡಲು, ಅಥವಾ ಅವರ ರಾಜಕೀಯ ಭವಿಷ್ಯವನ್ನು ನಾಶಗೊಳಿಸಲು ಮಹಿಳಾ ಮಣಿಗಳ ಸಂಬಂಧಗಳ ಮೂಲಕ ಕೆಡ್ಡಕ್ಕೆ ಬೀಳಿಸಲು ಪ್ರಯತ್ನಿಸುವ ಒಂದು ವಿಧಾನ.ಈ ಪ್ರಕರಣದಲ್ಲಿ, ರಾಜ್ಯದಲ್ಲಿ 48 ರಾಜಕಾರಣಿಗಳನ್ನು ಟಾರ್ಗೆಟ್ ಮಾಡುವ ಯೋಜನೆಯೊಂದು ಇದ್ದು, ಅದರಲ್ಲಿ ರಾಜಣ್ಣ ಕೂಡಾ ಒಬ್ಬರು ಎಂದು ಅವರು ಹೇಳಿದ್ದಾರೆ.
ರಾಜಣ್ಣ ಅವರ ಪ್ರಕಾರ, ಈ ಹನಿಟ್ರ್ಯಾಪ್ ಯತ್ನವು ಕೆಲವು ದಿನಗಳ ಹಿಂದೆಯೇ ನಡೆದಿತ್ತು. ಆದರೆ ಅವರು ಸುಮ್ಮನಿರುವ ನಿರ್ಧಾರ ತೆಗೆದುಕೊಂಡಿದ್ದರು. ನಂತರ, ಮಾಧ್ಯಮಗಳಲ್ಲಿ ಪ್ರಭಾವಿ ಸಚಿವರೊಬ್ಬರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿರುವ ವರದಿಗಳು ಪ್ರಸಾರವಾಗಿದ್ದವು. ವಿಧಾನಸಭೆಯಲ್ಲಿ ಈ ಬಗ್ಗೆ ಬಿಜೆಪಿ ನಾಯಕ ಸುನೀಲ್ ಕುಮಾರ್ ಪ್ರಸ್ತಾಪಿಸಿದ್ದರೂ ಮೌನ ವಹಿಸಿದ್ದರು. ಆದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜಣ್ಣ ಅವರ ಹೆಸರನ್ನು ಉಲ್ಲೇಖಿಸಿದರು.
ಬಿಜೆಪಿಗೆ ರಾಜಣ್ಣ ಸವಾಲು:
ಬಿಜೆಪಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ “ನಿರ್ದೇಶಕರು ಮತ್ತು ನಿರ್ಮಾಪಕರು” ಕಾಂಗ್ರೆಸ್ನಲ್ಲಿ ತುಂಬಾ ಇದ್ದಾರೆ ಎಂದು ಆರೋಪಿಸಿತ್ತು. ಈ ಕುರಿತಂತೆ ಪ್ರತಿಕ್ರಿಯಿಸಿದ ರಾಜಣ್ಣ, “ನಾನು ಯಾರನ್ನೂ ಅನುಮಾನಿಸುವುದಿಲ್ಲ, ಆದರೆ ಬಿಜೆಪಿಯವರು ಸ್ಪಷ್ಟವಾಗಿ ಹೆಸರು ಹೇಳಲಿ. ನಾನು ವೈಯಕ್ತಿಕ ಆರೋಪಗಳನ್ನು ಮಾಡುವುದಿಲ್ಲ” ಎಂದು ಹೇಳಿದರು.

ಹನಿಟ್ರ್ಯಾಪ್ ಸಂಚಿನ ಹಿಂದೆ ದೊಡ್ಡ ವ್ಯಕ್ತಿಯ ಕೈವಾಡ?
ಮಧುಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಎಲ್ಸಿ ಆರ್. ರಾಜೇಂದ್ರ, “ಈ ಹನಿಟ್ರ್ಯಾಪ್ ಸಂಚಿನ ಹಿಂದೆ ದೊಡ್ಡ ವ್ಯಕ್ತಿಯ ಕೈವಾಡ ಇದೆ ನನಗೆ ಸಂಪೂರ್ಣ ಮಾಹಿತಿ ಲಭ್ಯವಿದ್ದು, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒದಗಿಸುತ್ತೇನೆ” ಎಂದು ಹೇಳಿದರು.
ಸಿದ್ದರಾಮಯ್ಯ ಭೇಟಿಯಾದ ರಾಜೇಂದ್ರ: ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ರಾಜೇಂದ್ರ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.
Read More Politics News/ ಇನ್ನಷ್ಟು ರಾಜಕೀಯ ಸುದ್ದಿ ಓದಿ:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಲಕಾವೇರಿಗೆ ಭೇಟಿ- ಕಾವೇರಿ ತಾಯಿ ಆರಾಧನೆ, ನಾಳೆಯಿಂದ ‘Save Water’ ಅಭಿಯಾನ
ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ:
ಈ ವೇಳೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, “ಈ ಪ್ರಕರಣದಲ್ಲಿ ಕಾನೂನು ಸಲಹೆ ಪಡೆದು ಪೊಲೀಸ್ ದೂರು ದಾಖಲಿಸಲು ರಾಜಣ್ಣ ಅವರಿಗೆ ಸೂಚಿಸಿದ್ದೇನೆ” ಎಂದು ಹೇಳಿದರು. “ಘರ್ಜಿಸುವ ಹುಲಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮತ್ತು ಸಿಡಿಗಳ ಮೂಲಕ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದರು.
ಈ ಪ್ರಕರಣದ ಕುರಿತಂತೆ ಮುಂದೇನಾಗಬಹುದು?
- ರಾಜಣ್ಣ ಈ ಬಗ್ಗೆ ಗೃಹ ಸಚಿವರಿಗೆ ದೂರು ಸಲ್ಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
- ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಲಾಗಿದೆ.
- ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ರಾಜಕೀಯ ಯುದ್ಧ ತೀವ್ರಗೊಳ್ಳುವ ಸಾಧ್ಯತೆ.
- ಪೊಲೀಸ್ ತನಿಖೆಯಿಂದ ಹೆಚ್ಚಿನ ವಿಚಾರಗಳು ಬಹಿರಂಗವಾಗುವ ನಿರೀಕ್ಷೆ.
- ಈ ಘಟನೆ ರಾಜ್ಯ ರಾಜಕಾರಣದಲ್ಲಿ ಹಲವಾರು ಚರ್ಚೆಗಳಿಗೆ ಕಾರಣವಾಗಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳತ್ತ ಎಲ್ಲರ ಕಣ್ಣುಗಳೂ ನಿಂತಿವೆ!
ನೀವು ಈ ವಿಚಾರದ ಬಗ್ಗೆ ನಿಮಗೆ ಏನು ಅನಿಸುತ್ತದೆ ಕಮೆಂಟ್ ನಲ್ಲಿ ತಿಳಿಸಿರಿ. ಇದು ರಾಜಕೀಯ ದಾಳಿಯ ಕಸರತ್ತಾ? ಅಥವಾ ಸತ್ಯ ಕಥೆನಾ?
ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಓದುಗರಿಗೆ ತಲುಪಿಸುತ್ತಿದ್ದಾರೆ.
ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.