ಮಾರ್ಚ್ 22 ಕರ್ನಾಟಕ ಬಂದ್: ಮರಾಠಿಗರ ದೌರ್ಜನ್ಯ ವಿರುದ್ಧ ಕನ್ನಡಪರ ಸಂಘಟನೆಗಳ ಹೋರಾಟ, ಅಂದು ಕರ್ನಾಟಕದಲ್ಲಿ ಯಾವ ವ ಸೌಲಭ್ಯಗಳು ಇರುತ್ತದೆ ಇರುವುದಿಲ್ಲ ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ
Karnataka Bandh March 22 : ಬೆಳಗಾವಿ ಗಡಿಯಲ್ಲಿನ ಮರಾಠಿಗರ ಪುಂಡಾಟಿಕೆ ಮತ್ತು ಕನ್ನಡಿಗರ ಮೇಲಿನ ದೌರ್ಜನ್ಯ ವಿರುದ್ಧ ಪ್ರತಿಯಾಗಿ, ಕನ್ನಡ ಪರ ಸಂಘಟನೆಗಳು ಮಾರ್ಚ್ 22 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ‘ಕನ್ನಡ ಒಕ್ಕೂಟ – ಕರ್ನಾಟಕ ರಾಜ್ಯ’ ಈ ಪ್ರತಿಭಟನೆಯನ್ನು ಆಯೋಜಿಸಿದ್ದು, ರಾಜ್ಯದ ಬಹುತೇಕ ಸಂಘಟನೆಗಳು ಇದಕ್ಕೆ ಬೆಂಬಲ ನೀಡುವ ಸಾಧ್ಯತೆಯಿದೆ.

ಮಾರ್ಚ್ 22 ಕರ್ನಾಟಕ ಬಂದ್ ಯಾಕೆ?
ಬೆಳಗಾವಿಯಲ್ಲಿ ಕಳೆದ ತಿಂಗಳು ಮಹಾರಾಷ್ಟ್ರ ಪರ ಸಂಘಟನೆಗಳು ಪುಂಡಾಟಿಕೆ ಮೆರೆದಿದ್ದು, ಕರ್ನಾಟಕ ರಾಜ್ಯ ಸಾರಿಗೆ ಬಸ್ಗಳ ಮೇಲೆ ದಾಳಿ, ಕನ್ನಡಿಗರ ಮೇಲೆ ಹಲ್ಲೆ, ಜೈ ಮಹಾರಾಷ್ಟ್ರ ಘೋಷಣೆ ಕೂಗಿ ಗಲಾಟೆ ಸೃಷ್ಠಿ ಮಾಡಿದ್ದರು. ಈ ಘಟನೆಯ ಬಗ್ಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ, ಕನ್ನಡಪರ ಹೋರಾಟಗಾರರು ಈ ಬಾರಿ ಬಂದ್ ಗೆ ಕರೆ ನೀಡಿದ್ದಾರೆ.
ಕಳೆದ ಬಾರಿ ಬಂದ್ ಎಂಥ ಪ್ರತಿಕ್ರಿಯೆ ಕಂಡಿತ್ತು?
ಕಳೆದ ಬಾರಿ ನಡೆದ ಕರ್ನಾಟಕ ಬಂದ್ ಗಳು ಜಾಸ್ತಿ ಪರಿಣಾಮಕಾರಿಯಾಗಿರಲಿಲ್ಲ. ಕೆಲವು ಸಂಘಟನೆಗಳು ಮಾತ್ರ ಭಾಗಿಯಾಗಿದ್ದರಿಂದ ಬಂದ್ ಮಿಶ್ರ ಪ್ರತಿಕ್ರಿಯೆ ಕಂಡಿತ್ತು. ಆದರೆ ಈ ಬಾರಿ, ಪ್ರಮುಖ ಕನ್ನಡಪರ ಸಂಘಟನೆಗಳೆಲ್ಲಾ ಬೆಂಬಲ ವ್ಯಕ್ತಪಡಿಸಿರುವುದರಿಂದ ರಾಜ್ಯಮಟ್ಟದ ಬಂದ್ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆಯಿದೆ.
ಈ ಬಾರಿ ಬಂದ್ ಹೇಗೆ ಪರಿಣಾಮ ಬೀರುತ್ತದೆ?
ಅವಶ್ಯಕ ಸೇವೆಗಳು: ಹಾಲು, ಮೆಡಿಕಲ್ ಶಾಪ್, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಸಾರಿಗೆ: KSRTC, BMTC ಬಸ್ಗಳ ಸಂಚಾರ ರದ್ದಾಗುವ ಸಾಧ್ಯತೆ ಇದೆ.
ಆಟೋ & ಟ್ಯಾಕ್ಸಿ: ಆಟೋ ಮತ್ತು ಖಾಸಗಿ ಟ್ಯಾಕ್ಸಿ ಸಂಚಾರಕ್ಕೂ ಅಡ್ಡಿಯಾಗಬಹುದು.
ವಿದ್ಯಾಸಂಸ್ಥೆಗಳು: ಒಂದರಿಂದ 9ನೇ ತರಗತಿಯ ವರೆಗೆ ಪರೀಕ್ಷೆಗಳು ಈಗಾಗಲೇ ಮುಗಿದಿರುವುದರಿಂದ ಶಾಲೆಗಳು ಮುಚ್ಚುವ ಸಂಭವ ಹೆಚ್ಚಿದೆ, ಇನ್ನು ಹತ್ತನೇ ತರಗತಿ ಅಂತಿಮ ಪರೀಕ್ಷೆ ವೇಳಾಪಟ್ಟಿಯಂತೆ ಪರೀಕ್ಷೆ ಶುರುವಾಗಿರುವುದರಿಂದ ಶಿಕ್ಷಣ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಕಾದು ನೋಡಬೇಕಾಗಿದೆ ಇನ್ನೂ ಕಾಲೇಜುಗಳ ನಿರ್ಧಾರ ಇನ್ನೂ ಅಂತಿಮಗೊಳ್ಳಬೇಕಾಗಿದೆ.
ವಾಣಿಜ್ಯ & ಬ್ಯಾಂಕ್: ನಾಲ್ಕನೇ ಶನಿವಾರವಾದ್ದರಿಂದ, ರಾಜ್ಯದ ಬ್ಯಾಂಕ್ಗಳು ಬಂದ್ ಆಗಿರುತ್ತವೆ.
ಹೋಟೆಲ್ ಮತ್ತು ಅಂಗಡಿ ಮುಂಗಟ್ಟುಗಳ ಸ್ಥಿತಿ: ಬಂದ್ ದಿನ ಹೋಟೆಲ್ಗಳು ತೆರೆದಿರುತ್ತವೆಯಾ? ಹೋಟೆಲುಗಳ ಸಂಘವು ಶೀಘ್ರದಲ್ಲಿಯೇ ಅಧಿಕೃತ ಘೋಷಣೆ ನೀಡಲಿದೆ.ಹೋಟೆಲ್, ಅಂಗಡಿ ಮುಂಗಟ್ಟುಗಳೂ ಬಂದ್ ಆಗುವ ಸಾಧ್ಯತೆ ಇದೆ
ಬೆಳಗಾವಿಯಲ್ಲಿ ಪ್ರತ್ಯೇಕ ಪ್ರತಿಭಟನೆ:
ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರು ಬೃಹತ್ ಪ್ರತಿಭಟನೆ ನಡೆಸಲಿದ್ದು, ಸರಕಾರ ಈ ವಿಷಯದಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಿದ್ದಾರೆ. ಬೆಂಗಳೂರು ಸೇರಿದಂತೆ ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ಕಲಬುರಗಿ ಮುಂತಾದ ಪ್ರದೇಶಗಳಲ್ಲಿ ಹೋರಾಟ ತೀವ್ರಗೊಳ್ಳಲಿದೆ.

ಬಂದ್ ಯಶಸ್ವಿಯಾಗಲು ಕನ್ನಡಪರ ಸಂಘಟನೆಗಳ ಒತ್ತಡ:
ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ, ಕನ್ನಡ ಚಳುವಳಿ ವಾಟಾಳ್ ಪಕ್ಷ ಸೇರಿದಂತೆ ಅನೇಕ ಸಂಘಟನೆಗಳು ಮಾರ್ಚ್ 22 ಕರ್ನಾಟಕ ಬಂದ್ ಅನ್ನು ಬೆಂಬಲಿಸಿ, ರಾಜ್ಯ ಸರ್ಕಾರ ಮರಾಠಿಗರ ಪುಂಡಾಟಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿವೆ. ವಾಟಾಳ್ ನಾಗರಾಜ್ ಈ ಪ್ರತಿಭಟನೆಯ ಮುನ್ನೋಟ ನೀಡುತ್ತಾ, “ಈ ಬಾರಿ ಕನ್ನಡಿಗರು ಒಂದಾಗಿ, ಸರಕಾರವನ್ನು ಎಚ್ಚರಿಸಲೇಬೇಕು” ಎಂದು ಹೇಳಿದ್ದಾರೆ.
ನಿಮ್ಮ ಅಭಿಪ್ರಾಯವೇನು? ಮಾರ್ಚ್ 22 ಕರ್ನಾಟಕ ಬಂದ್ ಕುರಿತಾಗಿ ನೀವು ಏನನ್ನು ನಿರೀಕ್ಷಿಸುತ್ತೀರಿ? ನೀವು ಬೆಂಬಲಿಸುತ್ತೀರಾ? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ!
ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಓದುಗರಿಗೆ ತಲುಪಿಸುತ್ತಿದ್ದಾರೆ.
ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.