Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ಏಪ್ರಿಲ್ 19 ರಿಂದ ಮೈಸೂರಿನಲ್ಲಿ ಬೃಹತ್ ಅಗ್ನಿವೀರ್ ರ‍್ಯಾಲಿ: ಸೇನೆ ಸೇರುವ ಯುವಕರಿಗೆ ಇಲ್ಲಿದೆ ಮಹತ್ವದ ಮಾಹಿತಿ!

  • Picture of Gundijalu Shwetha By Gundijalu Shwetha
  • Published On: April 9, 2026
Agniveer Rally Mysuru: ಏಪ್ರಿಲ್ 19 ರಿಂದ ಮೈಸೂರಿನಲ್ಲಿ ಬೃಹತ್ ಅಗ್ನಿವೀರ್ ರ‍್ಯಾಲಿ: ಸೇನೆ ಸೇರುವ ಯುವಕರಿಗೆ ಇಲ್ಲಿದೆ ಮಹತ್ವದ ಮಾಹಿತಿ!

Agniveer Rally Mysuru: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಏಪ್ರಿಲ್ 19 ರಿಂದ 27 ರವರೆಗೆ ಅಗ್ನಿವೀರ್ ರ‍್ಯಾಲಿ ನಡೆಯಲಿದ್ದು, 6000ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಈ ಬೃಹತ್ ಸೇನಾ ನೇಮಕಾತಿಯ ಸಂಪೂರ್ಣ ಮಾಹಿತಿ ಓದಿ.

ಮೈಸೂರಿನಲ್ಲಿ ಬೃಹತ್ ಅಗ್ನಿವೀರ್ ರ‍್ಯಾಲಿ: ಸೇನೆ ಸೇರುವ ಯುವಕರಿಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

ದೇಶ ಕಾಯುವ ಸೈನಿಕನಾಗಬೇಕು, ಮೈಮೇಲೆ ಸೇನಾ ಸಮವಸ್ತ್ರ ಹಾಕಿಕೊಂಡು ಹೆಮ್ಮೆಯಿಂದ ಓಡಾಡಬೇಕು ಅನ್ನೋದು ನಮ್ಮ ನಾಡಿನ ಲಕ್ಷಾಂತರ ಯುವಕರ ಕನಸು. ಈ ಕನಸಿಗೆ ರೆಕ್ಕೆ ಪುಕ್ಕ ಕಟ್ಟಲು ಈಗ ಸಮಯ ಬಂದಿದೆ. ಹೌದು, ಸಾಂಸ್ಕೃತಿಕ ನಗರಿ ಮೈಸೂರು ಈಗ ಬೃಹತ್ ಸೇನಾ ನೇಮಕಾತಿಗೆ ಸಾಕ್ಷಿಯಾಗಲು ಸಜ್ಜಾಗಿದೆ. ಮೈಸೂರಿನ ನಜರ್‌ಬಾದ್‌ನಲ್ಲಿರುವ ಫೇಮಸ್ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಏಪ್ರಿಲ್ 19 ರಿಂದ ಏಪ್ರಿಲ್ 27ರ ತನಕ ಬಹುನಿರೀಕ್ಷಿತ Agniveer Army Rally ನಡೆಯಲಿದೆ. Agniveer Rally Mysuru

WhatsApp Channel
Join Now
Telegram Channel
Join Now

ನೀವೇನಾದರೂ ಕಳೆದ ವರ್ಷ ನಡೆದಿದ್ದ ಲಿಖಿತ ಪರೀಕ್ಷೆ ಬರೆದು, ರಿಸಲ್ಟ್ ಗಾಗಿ ಕಾಯ್ತಾ ಇದ್ದರೆ, ಈ ಮಾಹಿತಿ ನಿಮಗೆ ಬಹಳ ಮುಖ್ಯ. ಬೆಂಗಳೂರಿನ Indian Army Recruitment ವಿಭಾಗದ ಅಧಿಕಾರಿ ಕರ್ನಲ್ ವಿವೇಕ್ ಜಮಾದಾರ್ ಅವರು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಕಳೆದ ಜೂನ್ ತಿಂಗಳಿನಲ್ಲಿ ಅಗ್ನಿವೀರ್ ಲಿಖಿತ ಪರೀಕ್ಷೆ ನಡೆದಿತ್ತು. ಅದರಲ್ಲಿ ಪಾಸ್ ಆದ ಅಭ್ಯರ್ಥಿಗಳಿಗೆ ಈಗ ಎರಡನೇ ಹಂತದ ಪರೀಕ್ಷೆ ಅಂದರೆ, ಸ್ಕ್ರೀನಿಂಗ್ ಅಥವಾ ದೈಹಿಕ ದೃಢತಾ ಪರೀಕ್ಷೆ (ಫಿಸಿಕಲ್ ಟೆಸ್ಟ್) ನಡೆಯಲಿದೆ.

ಎಷ್ಟು ಜನ ಬರ್ತಾರೆ? ಏನೆಲ್ಲಾ ನಡೆಯುತ್ತೆ?

ಈ ಬಾರಿಯ ರ‍್ಯಾಲಿಯಲ್ಲಿ ಬರೋಬ್ಬರಿ 6,235 ಜನ ಯುವಕ-ಯುವತಿಯರು ಭಾಗವಹಿಸುತ್ತಿದ್ದಾರೆ. ಇದರಲ್ಲಿ 6,043 ಯುವಕರು ಮತ್ತು 192 ಯುವತಿಯರು ಸೇರಿದ್ದಾರೆ. ಪ್ರತಿದಿನ ಸುಮಾರು 800 ಅಭ್ಯರ್ಥಿಗಳಿಗೆ Agniveer Physical Test ನಡೆಯಲಿದೆ. ಓಟ, ಜಿಗಿತ ಸೇರಿದಂತೆ ಸೇನೆಗೆ ಬೇಕಾದ ಫಿಟ್ನೆಸ್ ಇದೆಯಾ ಅಂತ ಇಲ್ಲಿ ಚೆಕ್ ಮಾಡ್ತಾರೆ.

ಯಾರು ಈ ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗ್ತಾರೋ, ಅವರಿಗೆ ಮಾತ್ರ ಮುಂದಿನ ಹಂತ ಅಂದರೆ ವೈದ್ಯಕೀಯ ಪರೀಕ್ಷೆ (ಮೆಡಿಕಲ್ ಟೆಸ್ಟ್) ಇರುತ್ತದೆ. ಫಿಸಿಕಲ್ ಟೆಸ್ಟ್ ನಲ್ಲಿ ಫೇಲ್ ಆದವರು ಮನೆಗೆ ವಾಪಸ್ ಹೋಗಬೇಕಾಗುತ್ತದೆ. ಇನ್ನು, ಮಹಿಳಾ ಅಭ್ಯರ್ಥಿಗಳಿಗೆಂದೇ ವಿಶೇಷವಾಗಿ ಏಪ್ರಿಲ್ 27 ರಂದು ರ‍್ಯಾಲಿ ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಳಿದುಕೊಳ್ಳಲು ವ್ಯವಸ್ಥೆ ಹೇಗಿದೆ?

ರಾಜ್ಯದ ಮೂಲೆ ಮೂಲೆಗಳಿಂದ ಬರುವ ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದು ಅಂತ, ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ಒಬ್ಬ ಅಭ್ಯರ್ಥಿ ಹೆಚ್ಚೆಂದರೆ ಒಂದು ಅಥವಾ ಎರಡು ದಿನ ಮಾತ್ರ ಇಲ್ಲಿ ಉಳಿದುಕೊಳ್ಳಬಹುದು. ಯಾಕಂದ್ರೆ, ದೈಹಿಕ ಪರೀಕ್ಷೆಯಲ್ಲಿ ಸೆಲೆಕ್ಟ್ ಆದವರು ಮಾತ್ರ ಮೆಡಿಕಲ್ ಟೆಸ್ಟ್ ಗಾಗಿ ಉಳಿಯುತ್ತಾರೆ.

ಈ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದರಿಂದ, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಆಂಬ್ಯುಲೆನ್ಸ್, ಡಾಕ್ಟರ್ ಗಳು, ಔಷಧಗಳನ್ನು ರೆಡಿ ಇಟ್ಟುಕೊಳ್ಳಲು ಸೂಚಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆ ಕಡೆಯಿಂದ ಕುಡಿಯುವ ನೀರು, ಟಾಯ್ಲೆಟ್ ವ್ಯವಸ್ಥೆ ಮಾಡಲಾಗುತ್ತಿದೆ. ಹಾಗೆಯೇ, ಪೊಲೀಸ್ ಇಲಾಖೆ ಬಿಗಿ ಭದ್ರತೆ ಒದಗಿಸಲಿದೆ. ಇದೊಂದು ಪ್ರಮುಖ Mysuru News ಆಗಿದ್ದು, ಇಡೀ ನಗರವೇ ಯುವ ಪಡೆಯನ್ನು ಸ್ವಾಗತಿಸಲು ಸಿದ್ಧವಾಗಿದೆ.

ವಿದ್ಯಾರ್ಥಿಗಳಿಗೆ ಸ್ಫೂರ್ತಿ

ಇನ್ನು ಸುಮಾರು 2030ನೇ ಇಸವಿಯವರೆಗೆ ಭಾರತೀಯ ಸೇನೆಯಲ್ಲಿ ದೊಡ್ಡ ಮಟ್ಟದ ನೇಮಕಾತಿಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ, ನಮ್ಮ ನಾಡಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ Join Indian Army ಅನ್ನೋ ಗುರಿಯೊಂದಿಗೆ ಮುಂದೆ ಬರಬೇಕು ಅನ್ನೋದು ಅಧಿಕಾರಿಗಳ ಆಸೆ.

ವಿಶೇಷ ಅಂದರೆ, ಈ ರ‍್ಯಾಲಿಯನ್ನು ನೋಡಲು ಶಾಲಾ ಮಕ್ಕಳಿಗೆ, ಅದರಲ್ಲೂ ಎನ್‌ಸಿಸಿ (NCC) ಮತ್ತು ಎನ್ಎಸ್ಎಸ್ (NSS) ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಸೇನೆಗೆ ಹೇಗೆ ಆಯ್ಕೆ ಮಾಡ್ತಾರೆ? ಅಲ್ಲಿನ ಶಿಸ್ತು ಹೇಗಿರುತ್ತೆ? ಅನ್ನೋದನ್ನ ಮಕ್ಕಳು ಕಣ್ಣಾರೆ ನೋಡಿದರೆ, ನಾಳೆ ಅವರಿಗೂ ಸೇನೆ ಸೇರುವ ಹುಮ್ಮಸ್ಸು ಬರುತ್ತದೆ ಅನ್ನೋದು ಇದರ ಹಿಂದಿನ ಉದ್ದೇಶ. ಇದಕ್ಕಾಗಿ ಶಾಲಾ ಶಿಕ್ಷಣ ಇಲಾಖೆಗೂ ಪತ್ರ ಬರೆಯಲಾಗಿದೆ.

ಒಟ್ಟಿನಲ್ಲಿ, ಮೈಸೂರಿನಲ್ಲಿ ನಡೆಯುತ್ತಿರುವ ಈ ಅಗ್ನಿವೀರ್ ರ‍್ಯಾಲಿ, ಸಾವಿರಾರು ಯುವಕರ ಬದುಕಿಗೆ ಹೊಸ ತಿರುವು ನೀಡೋದಂತೂ ಗ್ಯಾರಂಟಿ.

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:

  • Karnataka High Court Recruitment 2026: Last Date: 15/04/2026
  • Income Tax Department Recruitment 2026 : Last Date: 13/04/2026
  • Central Silk Board Recruitment 2026: Last Date: 13/04/2026

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now

Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

Karnataka Forest Watcher Recruitment 2026 : SSLC ಪಾಸ್ ಆದವರಿಗೆ ಅರಣ್ಯ ಇಲಾಖೆಯಲ್ಲಿ ಬಂಪರ್ : ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ 775 ಫಾರೆಸ್ಟ್ ವಾಚರ್ ಹುದ್ದೆಗಳಿಗೆ ನೇರ ನೇಮಕಾತಿ!

SSLC ಪಾಸ್ ಆದವರಿಗೆ ಅರಣ್ಯ ಇಲಾಖೆಯಲ್ಲಿ ಬಂಪರ್ : ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ 775 ಫಾರೆಸ್ಟ್ ವಾಚರ್ ಹುದ್ದೆಗಳಿಗೆ ನೇರ ನೇಮಕಾತಿ!

JNVST 2027: ಪೋಷಕರೇ ಗಮನಿಸಿ: 2027-28ನೇ ಸಾಲಿನ ಜವಾಹರ್ ನವೋದಯ ಶಾಲೆ 6ನೇ ತರಗತಿ ಉಚಿತ ಪ್ರವೇಶಾತಿ ಆರಂಭ! ಇಂದೇ ಅರ್ಜಿ ಹಾಕಿ!

ಪೋಷಕರೇ ಗಮನಿಸಿ! 2027-28ನೇ ಸಾಲಿನ ಜವಾಹರ್ ನವೋದಯ ಶಾಲೆ 6ನೇ ತರಗತಿ ಉಚಿತ ಪ್ರವೇಶಾತಿ ಆರಂಭ! ಇಂದೇ ಅರ್ಜಿ ಹಾಕಿ!

IBPS PO recruitment 2026: ಬ್ಯಾಂಕ್ ಉದ್ಯೋಗ ಹುಡುಕುತ್ತಿರುವರಿಗೆ ಬಂಪರ್ ಅವಕಾಶ: IBPS ನಿಂದ 6715 ಬ್ಯಾಂಕ್ PO ಹುದ್ದೆಗಳ ಬೃಹತ್ ನೇಮಕಾತಿ ಪ್ರಕಟ!

ಬ್ಯಾಂಕ್ ಉದ್ಯೋಗ ಹುಡುಕುತ್ತಿರುವರಿಗೆ ಬಂಪರ್ ಅವಕಾಶ: IBPS ನಿಂದ 6715 ಬ್ಯಾಂಕ್ PO ಹುದ್ದೆಗಳ ಬೃಹತ್ ನೇಮಕಾತಿ ಪ್ರಕಟ!

HPCL Recruitment 2026: HPCL ನಲ್ಲಿ ಮೆಗಾ ನೇಮಕಾತಿ! ಡಿಪ್ಲೊಮಾ/ ಇಂಜಿನಿಯರಿಂಗ್ ಆದವರಿಗೆ ಬಂಪರ್ ಆಫರ್! 11 ಲಕ್ಷದವರೆಗೆ ಪ್ಯಾಕೇಜ್!

HPCL ನಲ್ಲಿ ಮೆಗಾ ನೇಮಕಾತಿ! ಡಿಪ್ಲೊಮಾ/ ಇಂಜಿನಿಯರಿಂಗ್ ಆದವರಿಗೆ ಬಂಪರ್ ಆಫರ್! 11 ಲಕ್ಷದವರೆಗೆ ಪ್ಯಾಕೇಜ್!

RRI Bengaluru recruitment 2026: ಬೆಂಗಳೂರಿನ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಭರ್ಜರಿ ನೇಮಕಾತಿ: ITI/Diploma/BE ಆದವರಿಗೆ ಕೇಂದ್ರ ಸರ್ಕಾರಿ ಕೆಲಸ! ಇಂದೇ ಅರ್ಜಿ ಸಲ್ಲಿಸಿ!

ಬೆಂಗಳೂರಿನ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಭರ್ಜರಿ ನೇಮಕಾತಿ: ITI/Diploma/BE ಆದವರಿಗೆ ಕೇಂದ್ರ ಸರ್ಕಾರಿ ಕೆಲಸ! ಇಂದೇ ಅರ್ಜಿ ಸಲ್ಲಿಸಿ!

PrevPreviousಮತ್ತೆ ಯುದ್ಧದ ಭೀತಿ: ಅತಂತ್ರ ಸ್ಥಿತಿಯಲ್ಲಿ ಇರಾನ್-ಅಮೆರಿಕ ಕದನ ವಿರಾಮ! ಲೆಬನಾನ್ ಮೇಲೆ ಇಸ್ರೇಲ್ ಸರಣಿ ಬಾಂಬ್ ದಾಳಿಗೆ 254ಕ್ಕೂ ಹೆಚ್ಚು ಬಲಿ!
NextNavigating the Crossroads: Top High-Paying Courses & Career Options After 12th/PUCNext
BPL Ration Card: ರದ್ದಾದ ಬಿಪಿಎಲ್ ಕಾರ್ಡ್‌ಗೆ ಮರುಜೀವ! 45 ದಿನಗಳ ಕಠಿಣ ಕಾಲಮಿತಿ ರದ್ದು! ನಿಮ್ಮ ರೇಷನ್ ಕಾರ್ಡ್ ಮತ್ತೆ ಪಡೆಯಲು ಇಲ್ಲಿದೆ ಕಂಪ್ಲೀಟ್ ಗೈಡ್!

ರದ್ದಾದ ಬಿಪಿಎಲ್ ಕಾರ್ಡ್‌ಗೆ ಮರುಜೀವ! 45 ದಿನಗಳ ಕಠಿಣ ಕಾಲಮಿತಿ ರದ್ದು! ನಿಮ್ಮ ರೇಷನ್ ಕಾರ್ಡ್ ಮತ್ತೆ ಪಡೆಯಲು ಇಲ್ಲಿದೆ ಕಂಪ್ಲೀಟ್ ಗೈಡ್!

6 July 2026
Read More »
SIR 2026 Karnataka: ಮೊಬೈಲ್‌ನಲ್ಲೇ ವೋಟರ್ ಲಿಸ್ಟ್ ಪರಿಷ್ಕರಣೆ ಮಾಡಿ: SIR 2026 ಗಾಗಿ ಹೊಸ ECINET ಆ್ಯಪ್ ಬಿಡುಗಡೆ!

ಮೊಬೈಲ್‌ನಲ್ಲೇ ವೋಟರ್ ಲಿಸ್ಟ್ ಪರಿಷ್ಕರಣೆ ಮಾಡಿ: SIR 2026 ಗಾಗಿ ಹೊಸ ECINET ಆ್ಯಪ್ ಬಿಡುಗಡೆ!

5 July 2026
Read More »
KFWCCF recruitment 2026: ಪದವಿ ಮುಗಿಸಿದವರಿಗೆ ಗುಡ್ ನ್ಯೂಸ್: ಅರಣ್ಯ ಇಲಾಖೆ KFWCCF ನಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ!

ಪದವಿ ಮುಗಿಸಿದವರಿಗೆ ಗುಡ್ ನ್ಯೂಸ್: ಅರಣ್ಯ ಇಲಾಖೆ KFWCCF ನಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ!

5 July 2026
Read More »
Page1 Page2 Page3 Page4 … Page154
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs