Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

Heart Health: ಹೃದಯಾಘಾತದ ಪ್ರಕರಣಗಳು ಏಕೆ ಹೆಚ್ಚಾಗುತ್ತಿದೆ? ಬೇಕಿರುವುದು ಆಸ್ಪತ್ರೆಗಳಲ್ಲ, ಶಿಸ್ತಿನ ಬದುಕು!

  • Picture of Gundijalu Shwetha By Gundijalu Shwetha
  • Published On: July 3, 2025
Heart Health: ಹೃದಯಾಘಾತದ ಪ್ರಕರಣಗಳು ಏಕೆ ಹೆಚ್ಚಾಗುತ್ತಿದೆ? ಬೇಕಿರುವುದು ಆಸ್ಪತ್ರೆಗಳಲ್ಲ, ಶಿಸ್ತಿನ ಬದುಕು!

Heart Health: ಹೃದಯಾಘಾತಗಳ ಹೆಚ್ಚಳಕ್ಕೆ ಕಾರಣವೇನು? ಆಸ್ಪತ್ರೆಗಳಿಗಿಂತ ಶಿಸ್ತಿನ ಜೀವನ ಏಕೆ ಮುಖ್ಯ? ನಿಮ್ಮ ಹೃದಯದ ಆರೋಗ್ಯ ಕಾಪಾಡಲು ಇಂದೇ ಬದಲಾವಣೆ ತನ್ನಿ.

WhatsApp Channel
Join Now
Telegram Channel
Join Now

ಹೃದಯಾಘಾತಗಳ ಹೆಚ್ಚಳ: ಆಸ್ಪತ್ರೆಗಳಲ್ಲ, ಬೇಕಿರುವುದು ಶಿಸ್ತಿನ ಬದುಕು!

ಬೆಂಗಳೂರು, ಜುಲೈ 03, 2025: ಇಂದಿನ ಆಧುನಿಕ ಬದುಕಿನ ವೇಗ ಎಷ್ಟು ಹೆಚ್ಚಾಗಿದೆಯೆಂದರೆ, ನಾವು ಬದುಕುವುದನ್ನೇ ಮರೆತು ಓಡುತ್ತಿದ್ದೇವೆ. ಇದರ ನೇರ ಪರಿಣಾಮ ನಮ್ಮ ಹೃದಯದ ಮೇಲೆ ಬೀರುತ್ತಿದೆ. ಒಂದು ಕಡೆ ಸ್ವಿಗ್ಗಿ, ಜೊಮಾಟೊಗಳ ಮೂಲಕ ಹತ್ತು ನಿಮಿಷದಲ್ಲಿ ನಾಲಿಗೆಗೆ ರುಚಿ ನೀಡುವ ಜಂಕ್ ಫುಡ್‌ಗಳು ಮನೆಬಾಗಿಲಿಗೆ ಬರುತ್ತವೆ. ಆದರೆ, ದುರದೃಷ್ಟವಶಾತ್ ಹೃದಯಾಘಾತದಂತಹ ತುರ್ತು ಪರಿಸ್ಥಿತಿ ಎದುರಾದಾಗ ಒಂದು ಆಂಬ್ಯುಲೆನ್ಸ್ ಅಥವಾ ಸೂಕ್ತ ಚಿಕಿತ್ಸೆ ಗಂಟೆಗಳ ಕಾಲ ಸಿಗುವುದಿಲ್ಲ ಎಂಬುದು ಇಂದಿನ ಕಟು ವಾಸ್ತವ.

ನಾವು ಸುಲಭವಾಗಿ ಸಿಗುವ ಹೋಟೆಲ್ ಆಹಾರಗಳಿಗೆ ಮಾರುಹೋಗಿ ನಮ್ಮ ದೇಹವನ್ನೇ ಕಸದ ತೊಟ್ಟಿ ಮಾಡಿಕೊಳ್ಳುತ್ತಿದ್ದೇವೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಕೇವಲ ಸುಸಜ್ಜಿತ ಆಸ್ಪತ್ರೆಗಳಿದ್ದರೆ ಸಾಲದು; ಬದಲಿಗೆ ನಮ್ಮ ಅಸ್ತವ್ಯಸ್ತವಾಗಿರುವ ಜೀವನಶೈಲಿಯನ್ನು ತಿದ್ದಿಕೊಳ್ಳುವ ಅನಿವಾರ್ಯತೆ ಇದೆ. ಕರಿದ ಪದಾರ್ಥಗಳು ಮತ್ತು ಸೋಮಾರಿತನದಿಂದ ದೂರವಿದ್ದು, ಶಿಸ್ತಿನ ಜೀವನ ರೂಪಿಸಿಕೊಳ್ಳುವುದೇ ನಿಜವಾದ ‘ಹೃದಯ ಚಿಕಿತ್ಸೆ’. ಹತ್ತು ನಿಮಿಷದ ರುಚಿಗಾಗಿ ಇಡೀ ಜೀವನವನ್ನೇ ಪಣಕ್ಕಿಡುವುದು ಎಷ್ಟು ಸರಿ?

ಹೃದಯ ನೀಡುವ ಸೂಚನೆಗಳನ್ನು ಕಡೆಗಣಿಸುವಿಕೆ:

ಹೃದಯಾಘಾತ ಎಂಬುದು ಅಚಾನಕ್ ಆಗಿ ಬರುವ ಅಪಘಾತವಲ್ಲ; ಅದು ನಮ್ಮ ದೇಹ ನೀಡುವ ನೂರಾರು ಎಚ್ಚರಿಕೆಗಳನ್ನು ನಾವು ಕಡೆಗಣಿಸಿದಾಗ ಸಂಭವಿಸುವ ದುರಂತ. ಹೃದಯವನ್ನು ನಾವು ಮನೆಯ ‘ಅಮ್ಮ’ನಿಗೆ ಹೋಲಿಸಬಹುದು. ತಾನು ನೋವುಂಡರೂ ಮನೆಯವರನ್ನು ಸಲಹುವ ಅಮ್ಮನಂತೆ, ಹೃದಯವೂ ಸಣ್ಣಪುಟ್ಟ ತೊಂದರೆಗಳನ್ನು ಸಹಿಸಿಕೊಳ್ಳುತ್ತಾ ಹೋಗುತ್ತದೆ. ಆದರೆ ಅದು ಕೈಮೀರಿ ಹೋದಾಗ ಮಾತ್ರ ಕಿರುಚುತ್ತದೆ. ಎದೆ ಭಾರವಾಗುವುದು, ಎಡಗೈ ಅಥವಾ ದವಡೆಯಲ್ಲಿ ಸೆಳೆತ, ಅತಿಯಾದ ಸುಸ್ತು ಅಥವಾ ರಾತ್ರಿ ವೇಳೆ ಸುಮ್ಮನೆ ಬೆವರುವಿಕೆಯಂತಹ ರೂಪದಲ್ಲಿ ಹೃದಯ ನಮಗೆ ಮೊದಲೇ ಸಿಗ್ನಲ್ ನೀಡುತ್ತಿರುತ್ತದೆ.

ಆದರೆ ನಾವೇನು ಮಾಡುತ್ತೇವೆ? ಎದೆಯಲ್ಲಿ ಸ್ವಲ್ಪ ಉರಿಯಾದರೆ ಸಾಕು, ಅದನ್ನು ‘ಗ್ಯಾಸ್ಟ್ರಿಕ್’ ಎಂದು ಹಣೆಪಟ್ಟಿ ಹಚ್ಚುತ್ತೇವೆ. ಒಂದು ಲೋಟ ಜೀರಿಗೆ ನೀರು ಅಥವಾ ಓಮದ ಕಾಳು ತಿಂದು “ಸರಿಹೋಗುತ್ತದೆ” ಎಂದು ನಮ್ಮನ್ನು ನಾವೇ ನಂಬಿಸಿಕೊಳ್ಳುತ್ತೇವೆ. ಇಂತಹ ಸಣ್ಣ ಪುಟ್ಟ ನಿರ್ಲಕ್ಷ್ಯಗಳೇ ಮುಂದೆ ದೊಡ್ಡ ಬೆಲೆಯಾಗಿ ಪರಿಣಮಿಸುತ್ತವೆ. ದೇಹ ನೀಡುವ ‘ಅಜೀರ್ಣ’ ಎಂಬ ಸಣ್ಣ ಸುಳಿವು ಕೂಡ ಹಲವು ಬಾರಿ ಹೃದಯದ ಕೂಗಾಗಿರಬಹುದು. ವೈದ್ಯರ ಬಳಿ ಹೋಗಿ ಒಂದು ‘ಇಸಿಜಿ’ ಮಾಡಿಸಿಕೊಳ್ಳುವ ಬದಲು, ಸ್ವಯಂ ವೈದ್ಯ ಪದ್ಧತಿಗೆ ಮೊರೆ ಹೋಗುವುದು ಜೀವಕ್ಕೆ ಮಾಡುವ ದ್ರೋಹವಲ್ಲವೇ?

Heart Health: ದೇಹದ ನಿರ್ಲಕ್ಷ್ಯ:

ನಮ್ಮ ವಾಹನದ ಸೈಲೆನ್ಸರ್‌ನಲ್ಲಿ ಸಣ್ಣದೊಂದು ಕಿರಿಕಿರಿ ಶಬ್ದ ಕೇಳಿಸಿದರೂ ಸಾಕು, ಕೆಲಸ ಬಿಟ್ಟು ಗ್ಯಾರೇಜಿಗೆ ಓಡುತ್ತೇವೆ. ಎಣ್ಣೆ ಬದಲಾಯಿಸುವುದು, ಸರ್ವಿಸ್ ಮಾಡಿಸುವುದು – ಹೀಗೆ ಯಂತ್ರದ ಬಗ್ಗೆ ತೋರಿಸುವ ಕಾಳಜಿ ನಮ್ಮ ಜೀವದ ಮೇಲಿಲ್ಲದಿರುವುದು ಎಷ್ಟು ದೊಡ್ಡ ವಿಪರ್ಯಾಸ! ನಮ್ಮ ದೇಹ ಎಂಬ ಈ ಅದ್ಭುತ ಯಂತ್ರ ವರ್ಷವಿಡೀ ದಣಿವಿಲ್ಲದೆ ದುಡಿಯುತ್ತಿದ್ದರೂ, ವರ್ಷಕ್ಕೊಮ್ಮೆಯಾದರೂ ಅದರ ಒಳಹರಿವನ್ನು ಪರೀಕ್ಷಿಸಿಕೊಳ್ಳುವ ಕನಿಷ್ಠ ಜವಾಬ್ದಾರಿ ನಮಗಿಲ್ಲ. ಒಂದು ವೇಳೆ ಕೆಲಸ ಮಾಡುವ ಕಂಪನಿಗಳೇ ಉಚಿತವಾಗಿ ‘ಫುಲ್ ಬಾಡಿ ಚೆಕಪ್’ ಮಾಡಿಸಿದರೂ, ವರದಿಯಲ್ಲಿ ಬಿಪಿ ಅಥವಾ ಕೊಲೆಸ್ಟ್ರಾಲ್ ಏರಿರುವುದು ಕಂಡುಬಂದರೆ “ಅದೆಲ್ಲಾ ಮಾಮೂಲಿ” ಎಂದು ಹಗುರವಾಗಿ ತಳ್ಳಿಹಾಕುತ್ತೇವೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇವೆಲ್ಲಾ “ಆಸ್ಪತ್ರೆಗಳ ಷಡ್ಯಂತ್ರ, ಹಣ ಮಾಡುವ ದಂಧೆ” ಎಂದು ಬೊಬ್ಬೆ ಹೊಡೆಯುವ ಮೂಲಕ ನಮ್ಮ ನಿರ್ಲಕ್ಷ್ಯವನ್ನು ಸಮರ್ಥಿಸಿಕೊಳ್ಳುತ್ತೇವೆ. ವೈದ್ಯಕೀಯ ಕ್ಷೇತ್ರವನ್ನು ದೂಷಿಸುವ ಭರದಲ್ಲಿ ನಮ್ಮ ರಕ್ತನಾಳಗಳಲ್ಲಿ ಅಡಗಿರುವ ಅಪಾಯದ ಸುಳಿವುಗಳನ್ನು ನಾವು ಮರೆತುಬಿಡುತ್ತೇವೆ. ನೆನಪಿಡಿ, ಕಾರಿನ ಬಿಡಿಭಾಗಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ, ಆದರೆ ನಿಮ್ಮ ಹೃದಯಕ್ಕಲ್ಲ. ಈ ಪೂರ್ವಗ್ರಹ ಪೀಡಿತ ಮನಸ್ಥಿತಿಯೇ ಇಂದು ನಮ್ಮ ಅಕಾಲಿಕ ಮರಣಗಳಿಗೆ ನೇರ ಕಾರಣವಾಗುತ್ತಿದೆ. ಪರೀಕ್ಷಾ ವರದಿಗಳು ನಮ್ಮನ್ನು ಹೆದರಿಸಲಿಕ್ಕಲ್ಲ, ಎಚ್ಚರಿಸಲಿಕ್ಕೆ ಇವೆ ಎಂಬ ಸತ್ಯವನ್ನು ನಾವು ಅರಿಯಲೇಬೇಕಿದೆ.

ಕೋವಿಡ್ ನಂತರದ ಒತ್ತಡ ಮತ್ತು ಆಧುನಿಕ ಜೀವನಶೈಲಿ:

ಕೋವಿಡ್ ಎಂಬ ಬಿರುಗಾಳಿ ಅಪ್ಪಳಿಸಿ ಹೋದ ಮೇಲೆ ನಮ್ಮ ಬದುಕು ಮೊದಲಿನಂತಿಲ್ಲ. ಲಾಕ್‌ಡೌನ್ ಸೃಷ್ಟಿಸಿದ ಆರ್ಥಿಕ ಅಸ್ಥಿರತೆ, ಕೈತಪ್ಪಿದ ಕೆಲಸಗಳು ಮತ್ತು ಬೆಟ್ಟದಷ್ಟು ಬೆಳೆದ ಸಾಲದ ಹೊರೆ ಸಾಮಾನ್ಯ ಜನರ ನೆಮ್ಮದಿಯನ್ನು ಕಸಿದುಕೊಂಡಿವೆ. ಆದರೆ, ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೂ ನಮ್ಮ ಅಹಂಕಾರ ಮತ್ತು ಪ್ರದರ್ಶನ ಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇತರರ ‘ಫೇಕ್’ ವೈಭವದ ಬದುಕನ್ನು ನೋಡಿ, ನಾವೂ ಅತಿಯಾದ ಸಾಲ ಮಾಡಿ, ದುಬಾರಿ ಕಾರು, ಮೊಬೈಲ್‌ಗಳ ಹಿಂದೆ ಬಿದ್ದು ಹೈರಾಣಾಗುತ್ತಿದ್ದೇವೆ. ಈ ಮಾನಸಿಕ ಒತ್ತಡದ ಬೆಂಕಿಗೆ ನಾವು ಹಾಕುತ್ತಿರುವ ತುಪ್ಪವೆಂದರೆ ನಮ್ಮ ಶಿಸ್ತುರಹಿತ ಆಹಾರ ಪದ್ಧತಿ!

ಇಂದು ರಸ್ತೆ ಬದಿಯಲ್ಲಿರುವ ಬಿರಿಯಾನಿ ಹೋಟೆಲ್‌ಗಳು, ಕಬಾಬ್, ಗೋಬಿ, ಎಣ್ಣೆಯಲ್ಲಿ ಕರಿದ ಬೋಂಡಾ-ಬಜ್ಜಿ ಅಂಗಡಿಗಳ ಮುಂದೆ ನಿಂತಿರುವ ಜನರ ಸಾಲನ್ನು ನೋಡಿದರೆ, “ಆರೋಗ್ಯ” ಎಂಬ ಪದವೇ ಮರೆತುಹೋದಂತಿದೆ. ಯುವಜನತೆ ವೈನ್ ಶಾಪ್‌ಗಳ ಮುಂದೆ ಕ್ಯೂ ನಿಂತಿರುವುದನ್ನು ನೋಡಿದರೆ ನಮ್ಮ ಭವಿಷ್ಯದ ದಿಕ್ಸೂಚಿ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ನಾಲಿಗೆಯ ರುಚಿಗಾಗಿ ಯಕಶ್ಚಿತ್ ಜಂಕ್ ಫುಡ್‌ಗಳಿಗೆ ಮಾರುಹೋಗಿ, ದೇಹಕ್ಕೆ ಕನಿಷ್ಠ ವ್ಯಾಯಾಮವನ್ನೂ ನೀಡದೆ ನಾವು ಸಾವಿನ ಬಾಗಿಲನ್ನು ನಾವೇ ತಟ್ಟುತ್ತಿದ್ದೇವೆ. ನಮ್ಮ ಯೋಗ್ಯತೆ ಮೀರಿ ಮಾಡಿಕೊಳ್ಳುತ್ತಿರುವ ಕಮಿಟ್‌ಮೆಂಟ್‌ಗಳು ಮತ್ತು ಅತಿಯಾದ ಕರಿದ ತಿಂಡಿಗಳ ಸೇವನೆ—ಇವೆರಡೂ ಸೇರಿ ನಮ್ಮನ್ನು ಅಕಾಲಿಕ ವೃದ್ಧಾಪ್ಯ ಮತ್ತು ಅನಾರೋಗ್ಯದ ಕೂಪಕ್ಕೆ ದೂಡುತ್ತಿವೆ. ಬದುಕನ್ನು ಪ್ರೀತಿಸುವುದು ಎಂದರೆ ಕೇವಲ ತಿಂದು ಕುಡಿದು ಮಜಾ ಮಾಡುವುದಲ್ಲ, ಬದಲಿಗೆ ನಮ್ಮ ದೇಹವನ್ನೊಂದು ದೇವಾಲಯದಂತೆ ಕಾಪಾಡಿಕೊಳ್ಳುವುದು ಎಂಬುದನ್ನು ನಾವು ಮರೆತಿದ್ದೇವೆ.

ಪರಿಹಾರ: ಮನೆಯೊಳಗಿನ ಹೃದಯ ಕಾಳಜಿ ಕೇಂದ್ರಗಳು! ಆರೋಗ್ಯಕರ ಹೃದಯಕ್ಕೆ ಶಿಸ್ತೇ ಮದ್ದು

ಖಂಡಿತ, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೌಲಭ್ಯಗಳು ಆಧುನಿಕ ಸಮಾಜದ ಅನಿವಾರ್ಯತೆ ಎಂಬುದು ಸುಳ್ಳಲ್ಲ. ಆದರೆ, ಸಮಸ್ಯೆ ಇರುವುದು ನಾವು ಆಸ್ಪತ್ರೆಗಳನ್ನೇ ಅಂತಿಮ ಪರಿಹಾರ ಎಂದು ನಂಬಿರುವುದರಲ್ಲಿ. ನಿಜ ಹೇಳಬೇಕೆಂದರೆ, ನಮಗೆ ಅದ್ದೂರಿ ಆಸ್ಪತ್ರೆಗಳಿಗಿಂತ ಹೆಚ್ಚಾಗಿ ಬೇಕಿರುವುದು ಒಂದು ಶಿಸ್ತುಬದ್ಧ ಜೀವನಶೈಲಿ. ನಾವು ಪ್ರತಿದಿನ ನಿಯಮಿತವಾಗಿ ವಾಕಿಂಗ್ ಮಾಡುವುದು, ಕರಿದ ಎಣ್ಣೆ ತಿಂಡಿಗಳು ಮತ್ತು ವಿಷಕಾರಿಯಾದ ಜಂಕ್ ಫುಡ್‌ಗಳಿಂದ ಅಂತರ ಕಾಯ್ದುಕೊಳ್ಳುವುದು ಹಾಗೂ ಮನಸ್ಸಿನ ಪ್ರಶಾಂತತೆಗಾಗಿ ಕನಿಷ್ಠ ಧ್ಯಾನ ಅಥವಾ ಪ್ರಾಣಾಯಾಮವನ್ನು ಜೀವನದ ಭಾಗವಾಗಿಸಿಕೊಳ್ಳುವುದು ಅತಿ ಮುಖ್ಯ. ಇವುಗಳನ್ನು ಪಾಲಿಸಿದರೆ ನಾವೇ ಆಸ್ಪತ್ರೆಗಳನ್ನು ಹುಡುಕಿಕೊಂಡು ಹೋಗುವ ಪ್ರಮೇಯವೇ ಬರುವುದಿಲ್ಲ.

ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ನಮ್ಮ ಈ ಅಸಹಜ ಮತ್ತು ಅನಾರೋಗ್ಯಕರ ಜೀವನಶೈಲಿಗೆ ನಾವು ನಮ್ಮ ಮಕ್ಕಳನ್ನೂ ಎಳೆತರುತ್ತಿದ್ದೇವೆ. ಸಣ್ಣ ವಯಸ್ಸಿನಲ್ಲೇ ಅವರಿಗೆ ಪಿಜ್ಜಾ, ಬರ್ಗರ್ ಮತ್ತು ಸ್ಕ್ರೀನ್ ಅಡಿಕ್ಷನ್ ರೂಢಿ ಮಾಡಿಸಿ, ಅವರು “ಸುಖವಾಗಿದ್ದಾರೆ” ಎಂದು ನಾವು ಭ್ರಮಿಸುತ್ತಿದ್ದೇವೆ. ಅಸಲಿಗೆ ನಾವು ಅವರಿಗೆ ನೀಡುತ್ತಿರುವುದು ಆಸ್ತಿಯನ್ನಲ್ಲ, ಬದಲಿಗೆ ರೋಗಗಳ ದೊಡ್ಡ ಗಂಟನ್ನು! ಮಕ್ಕಳ ಮುಂದೆ ನಾವೇ ಮಾದರಿಯಾಗದಿದ್ದರೆ, ಮುಂಬರುವ ಪೀಳಿಗೆ ಇಡೀ ಜೀವನವನ್ನು ಆಸ್ಪತ್ರೆಗಳಲ್ಲೇ ಕಳೆಯಬೇಕಾದ ದುಸ್ಥಿತಿ ಬರಬಹುದು. ಆರೋಗ್ಯ ಎಂಬುದು ಕೊಳ್ಳುವ ವಸ್ತುವಲ್ಲ, ಅದು ನಮ್ಮ ದೈನಂದಿನ ಶಿಸ್ತಿನಿಂದ ಗಳಿಸಿಕೊಳ್ಳಬೇಕಾದ ಸಂಪತ್ತು ಎಂಬ ಸತ್ಯವನ್ನು ಈಗಲಾದರೂ ನಾವು ಅರಿಯಲೇಬೇಕಿದೆ.

ಈ ಪುಟ್ಟ ಹೃದಯವು ಇನ್ನೆಷ್ಟು ತಾನೇ ಸಹಿಸಿಕೊಳ್ಳಲು ಸಾಧ್ಯ? ನಮಗೆ ಈಗ ತುರ್ತಾಗಿ ಬೇಕಿರುವುದು ಬೃಹತ್ ಆಸ್ಪತ್ರೆಗಳಿಗಿಂತಲೂ ಹೆಚ್ಚಾಗಿ, ಪ್ರತಿ ಮನೆಯೊಳಗೂ ನಾವೇ ಕಟ್ಟಿಕೊಳ್ಳಬೇಕಾಗಿರುವ “ಹೃದಯದ ಕಾಳಜಿ ಕೇಂದ್ರಗಳು”. ಆರೋಗ್ಯಕರ ಜೀವನಶೈಲಿಯನ್ನು ನಮ್ಮದಾಗಿಸಿಕೊಳ್ಳುವುದು ಮತ್ತು ಅದರ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ.


Read More Science and Health Tips:

Garlic Health Benefits: ದಿನಕ್ಕೊಮ್ಮೆ ಬೆಳ್ಳುಳ್ಳಿ ತಿನ್ನಿ ಈ 8 ಪ್ರಮುಖ ಆರೋಗ್ಯ ಪ್ರಯೋಜನಗಳು ತಪ್ಪದೇ ತಿಳಿಯಿರಿ!

ಇಂತಹ ಆರೋಗ್ಯ ಮತ್ತು ಹೆಲ್ತ್ ಟಿಪ್ಸ್ ಗಳ ಬಗ್ಗೆ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

Bank of India Recruitment 2026: ಡಿಗ್ರಿ, ಇಂಜಿನಿಯರಿಂಗ್ ಪಾಸಾದವರಿಗೆ ಗುಡ್ ನ್ಯೂಸ್: Bank of India ದಲ್ಲಿ 146 ಮ್ಯಾನೇಜರ್ & ಆಫೀಸರ್ ಹುದ್ದೆಗಳಿಗೆ ನೇಮಕಾತಿ!

ಡಿಗ್ರಿ, ಇಂಜಿನಿಯರಿಂಗ್ ಪಾಸಾದವರಿಗೆ ಗುಡ್ ನ್ಯೂಸ್: Bank of India ದಲ್ಲಿ 146 ಮ್ಯಾನೇಜರ್ & ಆಫೀಸರ್ ಹುದ್ದೆಗಳಿಗೆ ನೇಮಕಾತಿ!

SAIL RSP Recruitment 2026: SSLC, BBA, MBA ಪಾಸಾದವರಿಗೆ ಸಿಹಿಸುದ್ದಿ! SAIL-RSP ನಲ್ಲಿ 112 ಹುದ್ದೆಗಳ ವಿಶೇಷ ನೇಮಕಾತಿ, ಆನ್‌ಲೈನ್ ಅರ್ಜಿ ಆಹ್ವಾನ!

SSLC, BBA, MBA ಪಾಸಾದವರಿಗೆ ಸಿಹಿಸುದ್ದಿ! SAIL-RSP ನಲ್ಲಿ 112 ಹುದ್ದೆಗಳ ವಿಶೇಷ ನೇಮಕಾತಿ, ಆನ್‌ಲೈನ್ ಅರ್ಜಿ ಆಹ್ವಾನ!

UPSC Recruitment 2026: ಕೇಂದ್ರ ಸರ್ಕಾರದಲ್ಲಿ ವಿಜ್ಞಾನಿ ಆಗುವ ಸುವರ್ಣಾವಕಾಶ: UPSC ಯಿಂದ ಬೃಹತ್ ನೇಮಕಾತಿ: 127 'ಜಿಯೋ-ಸೈಂಟಿಸ್ಟ್' ಹಾಗೂ 'ಅಸಿಸ್ಟೆಂಟ್ ಕೆಮಿಸ್ಟ್' ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕೇಂದ್ರ ಸರ್ಕಾರದಲ್ಲಿ ವಿಜ್ಞಾನಿ ಆಗುವ ಸುವರ್ಣಾವಕಾಶ: UPSC ಯಿಂದ ಬೃಹತ್ ನೇಮಕಾತಿ: 127 ‘ಜಿಯೋ-ಸೈಂಟಿಸ್ಟ್’ ಹಾಗೂ ‘ಅಸಿಸ್ಟೆಂಟ್ ಕೆಮಿಸ್ಟ್’ ಹುದ್ದೆಗಳಿಗೆ ಅರ್ಜಿ ಆಹ್ವಾನ!

IBPS RRB Recruitment 2026: ಯಾವುದೇ ಡಿಗ್ರಿ ಪಾಸಾದವರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ದೇಶಾದ್ಯಂತ 9,995 ಕ್ಲರ್ಕ್ ಮತ್ತು ಆಫೀಸರ್ ಹುದ್ದೆಗಳಿಗೆ IBPS ಅರ್ಜಿ ಆಹ್ವಾನ!

ಯಾವುದೇ ಡಿಗ್ರಿ ಪಾಸಾದವರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ದೇಶಾದ್ಯಂತ 9,995 ಕ್ಲರ್ಕ್ ಮತ್ತು ಆಫೀಸರ್ ಹುದ್ದೆಗಳಿಗೆ IBPS ಅರ್ಜಿ ಆಹ್ವಾನ!

Kodagu District Court Recruitment 2026: ಕೊಡಗು ಜಿಲ್ಲಾ ಕೋರ್ಟ್‌ನಲ್ಲಿ 10th ಮತ್ತು PUC ಪಾಸಾದವರಿಗೆ ಬಂಪರ್ ಆಫರ್: ಜವಾನ, ಟೈಪಿಸ್ಟ್, ಜಾರಿಕಾರ & ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕೊಡಗು ಜಿಲ್ಲಾ ಕೋರ್ಟ್‌ನಲ್ಲಿ 10th ಮತ್ತು PUC ಪಾಸಾದವರಿಗೆ ಬಂಪರ್ ಆಫರ್: ಜವಾನ, ಟೈಪಿಸ್ಟ್, ಜಾರಿಕಾರ & ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

PrevPreviousGarlic Health Benefits: ದಿನಕ್ಕೊಮ್ಮೆ ಬೆಳ್ಳುಳ್ಳಿ ತಿನ್ನಿ ಈ 8 ಪ್ರಮುಖ ಆರೋಗ್ಯ ಪ್ರಯೋಜನಗಳು ತಪ್ಪದೇ ತಿಳಿಯಿರಿ!
NextDetox Drink: ರೋಗ ನಿರೋಧಕ ಶಕ್ತಿ ಬೇಕಾ? ಚರ್ಮದ ಕಾಂತಿ ಹೆಚ್ಚಿಸಬೇಕಾ? ಈ 3 ಜ್ಯೂಸ್ ಮಿಶ್ರಣ ನಿಮ್ಮ ಉತ್ತಮ ಆಯ್ಕೆ!Next
A-Khata/B-Khata/E-Khata ಅಂದ್ರೆ ಏನು? ಪ್ರಾಪರ್ಟಿ ಖರೀದಿಸುವ ಮೊದಲು ಈ ಖಾತಾಗಳ ವಿಚಾರ ತಿಳಿದಿಲ್ಲ ಅಂದ್ರೆ ನಷ್ಟ ಖಚಿತ!

A-Khata/B-Khata/E-Khata ಅಂದ್ರೆ ಏನು? ಪ್ರಾಪರ್ಟಿ ಖರೀದಿಸುವ ಮೊದಲು ಈ ಖಾತಾಗಳ ವಿಚಾರ ತಿಳಿದಿಲ್ಲ ಅಂದ್ರೆ ನಷ್ಟ ಖಚಿತ!

21 July 2025
Read More »
LKG/UKG in Anganwadi's: ಪೋಷಕರೇ ಇಲ್ಲಿದೆ ಸಿಹಿ ಸುದ್ದಿ ಇನ್ಮೇಲೆ ದುಬಾರಿ ಫೀಸ್ ಚಿಂತೆ ಬಿಡಿ ಅಂಗನವಾಡಿಗಳಲ್ಲಿ ಪ್ರಾರಂಭವಾಗಲಿದೆ ಉಚಿತ LKG,UKG ಶಿಕ್ಷಣ!

LKG/UKG in Anganwadi’s: ಪೋಷಕರೇ ಇಲ್ಲಿದೆ ಸಿಹಿ ಸುದ್ದಿ! ಇನ್ಮೇಲೆ ದುಬಾರಿ ಫೀಸ್ ಚಿಂತೆ ಬಿಡಿ ಅಂಗನವಾಡಿಗಳಲ್ಲಿ ಪ್ರಾರಂಭವಾಗಲಿದೆ ಉಚಿತ LKG,UKG ಶಿಕ್ಷಣ!

20 July 2025
Read More »
Bhoosuraksha Yojana: ಇನ್ನೂ ಭೂ ದಾಖಲೆಗಾಗಿ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ ಎಲ್ಲವೂ ಆನ್‌ಲೈನ್‌ನಲ್ಲಿ ಲಭ್ಯ!

Bhoosuraksha Yojana: ಇನ್ನೂ ಭೂ ದಾಖಲೆಗಾಗಿ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ ಎಲ್ಲವೂ ಆನ್‌ಲೈನ್‌ನಲ್ಲಿ ಲಭ್ಯ!

19 July 2025
Read More »
Page1 … Page166 Page167 Page168 Page169 Page170 … Page173
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs