Karnataka Vishwakarma Communities: 2025-26ನೇ ಸಾಲಿಗೆ ವಿಶ್ವಕರ್ಮ ಸಮುದಾಯದವರಿಗೆ ನಿಗಮದಿಂದ ನೂತನ ಯೋಜನೆಗಳು – ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ! ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ. ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯದವರಿಗೆ ನಿಗಮದಿಂದ ನೀಡುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ, ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಮಾಹಿತಿ ನಿಮಗೆ ಉಪಯೋಗ ಅಗಲಿದೆ.
ಬೆಂಗಳೂರು, ಜೂನ್ 5: ಕರ್ನಾಟಕ ವಿಶ್ವಕರ್ಮ ಸಮುದಾಯಗಳ (Karnataka Vishwakarma Communities) ಅಭಿವೃದ್ಧಿ ನಿಗಮವು 2025-26ನೇ ಸಾಲಿಗೆ ವಿವಿಧ ಸ್ವಯಂ ಉದ್ಯೋಗ ಹಾಗೂ ಶಿಕ್ಷಣ ಸಹಾಯಧನ ಯೋಜನೆಗಳನ್ನು ಘೋಷಿಸಿದ್ದು, ಅರ್ಹ ಅರ್ಜಿದಾರರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಗಳ ಅಡಿಯಲ್ಲಿ ಸಾಲ ಅಥವಾ ಸಹಾಯಧನ ಪಡೆಯಲು ಇಚ್ಛಿಸುವ ಅರ್ಹ ವ್ಯಕ್ತಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಅರ್ಜಿಯ ಅಂತಿಮ ದಿನಾಂಕ: 02/07/2025
(ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆಯ ದಿನಾಂಕವಿಲ್ಲ)
VISHWAKARMA COMMUNITIES: ಯೋಜನೆಗಳ ವಿವರ:
- ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು: ಸಾಲ ಯೋಜನೆಯಲ್ಲಿ ಶೇ.20ರಷ್ಟು ಗರಿಷ್ಠ ರೂ.20,000/-ಗಳ ಸಹಾಯಧನ ಹಾಗೂ ಗರಿಷ್ಠ ಸಾಲ ರೂ.80,000/-ಗಳನ್ನು ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡುವುದು. ಪಂಚವೃತ್ತಿಆರ್ಥಿಕ ನೆರವುಯೋಜನೆಯಡಿ ಫಲಾನುಭವಿಗಳ ಯೋಜನಾ ವೆಚ್ಚವನ್ನು ಆಧಾರಿಸಿ ಕನಿಷ್ಠ ರೂ.50,000/-ರೂ ಗಳಿಂದ ಗರಿಷ್ಠ ತಲಾ 1 ಲಕ್ಷ ರೂ.ಗಳವರೆಗೆ ಘಟಕ ವೆಚ್ಚವನ್ನಾಗಿ ಮಂಜೂರು ಮಾಡಲಾಗುವುದು.
- ಸ್ವಯಂ ಉದ್ಯೋಗ ನೇರಸಾಲ ಯೋಜನೆ: ಈ ಯೋಜನೆಯಲ್ಲಿಗರಿಷ್ಠ ರೂ.50,000/-ಗಳ ಆರ್ಥಿಕ ನೆರವುಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ.20ರಷ್ಟು ಗರಿಷ್ಠ ರೂ.10,000/-ಗಳ ಸಹಾಯಧನ ಹಾಗೂ ಉಳಿಕೆ ಗರಿಷ್ಠ ರೂ.40,000/-ಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.
- ಅರಿವು-ಶೈಕ್ಷಣಿಕ ನೇರಸಾಲ (ಹೊಸ ಮತ್ತು ನವೀಕರಣ): ವಿದ್ಯಾರ್ಥಿಗಳಿಗೆ ಕೋರ್ಸ್ನಅವಧಿಗೆ ಶೇಕಡ 2ರ ಬಡ್ಡಿದರದಲ್ಲಿಗರಿಷ್ಠ ವಾರ್ಷಿಕ 1.00ಲಕ್ಷಗಳ ವರೆಗೆ ಸಾಲ ಒದಗಿಸಲಾಗುವುದು. ಮರುಪಾವತಿ ವಿದ್ಯಾರ್ಥಿಯುಕೋರ್ಸ್ ಪೂರ್ಣಗೊಂಡ 4ನೇ ತಿಂಗಳಿಂದ ಮರುಪಾವತಿಯ ಕಂತುಗಳು ತಾನಾಗಿಯೇ ಪ್ರಾರಂಭವಾಗುತ್ತವೆ. ಮರುಪಾವತಿಯಅವಧಿ 3 ವರ್ಷಗಳು (36 ಕಂತುಗಳು).
- ಗಂಗಾ ಕಲ್ಯಾಣ ಯೋಜನೆ – (ವಿಶಿಷ್ಟ ಜಿಲ್ಲೆಗಳಲ್ಲಿ ಜಮೀನು ಹೊಂದಿರುವವರಿಗೆ ಮಾತ್ರ) ಈ ಯೋಜನೆಯಲ್ಲಿ ವಿಶ್ವಕರ್ಮ ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು. ಸಣ್ಣ ಮತ್ತು ಅತಿಸಣ್ಣ ರೈತರಾಗಿಬೇಕು. ಘಟಕ ವೆಚ್ಚ:-ರೂ.2.50ಲಕ್ಷಗಳು ಇದರಲ್ಲಿ ರೂ.1.50ಲಕ್ಷಗಳ ಸಹಾಯಧನ(ಸಬ್ಸಿಡಿ) ಹಾಗೂ ಸಾಲದ ಮೊತ್ತ ರೂ.50,000/-ಗಳು ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಸಾಲ. ಸಾಲದ ಮರುಪಾವತಿ ಅವಧಿ 3 ವರ್ಷಗಳು, ರೂ.50,000ಗಳನ್ನು ವಿದ್ಯುದ್ದೀಕರಣಕ್ಕೆ ನೀಡಲಾಗುವುದು.
- ಬ್ಯಾಂಕ್ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ
- ಸ್ವಾವಲಂಬಿ ಸಾರಥಿ ಯೋಜನೆ
- ವಿದೇಶಿ ವ್ಯಾಸಂಗ ಯೋಜನೆ – (ವಾರ್ಷಿಕ ಆದಾಯ ಮಿತಿ ರೂ.15 ಲಕ್ಷ)
- ಸ್ವಾತಂತ್ರ್ಯ ಅಮೃತ ಮುನ್ನಡೆ ಯೋಜನೆ – (www.kaushalkar.com ನಲ್ಲಿ ಅರ್ಜಿ)
ಇದನ್ನೂ ಓದಿ: Nijasharana Ambigara Chowdaiah Development Corporation: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ 2025-26ನೇ ಸಾಲಿನ ಯೋಜನೆಗಳಿಗೆ ಅರ್ಜಿ ಆಹ್ವಾನ!
ಅರ್ಹತಾ ಮಾನದಂಡಗಳು:
- ಕರ್ನಾಟಕದ ಖಾಯಂ ನಿವಾಸಿ ಇರಬೇಕು
- ವಿಶ್ವಕರ್ಮ ಸಮುದಾಯ ಅಥವಾ ಅದರ ಉಪಜಾತಿಗೆ ಸೇರಿದವರಾಗಿರಬೇಕು
- ಜಾತಿ ಮತ್ತು ಆದಾಯ ಪ್ರಮಾಣಪತ್ರ ಕಡ್ಡಾಯ
- ವಯೋಮಿತಿ 18ರಿಂದ 55 ವರ್ಷ (ಅರಿವು ಯೋಜನೆಗೆ 30 ವರ್ಷವರೆಗೆ)
- ಹಿಂದಿನ ಯಾವ ಯೋಜನೆಯ ಸಹಾಯವನ್ನೂ ಪಡೆದಿರಬಾರದು
- ಆಧಾರ್-ಜೋಡಣೆ ಆಗಿರುವ ಮೊಬೈಲ್ ಹಾಗೂ ಬ್ಯಾಂಕ್ ಖಾತೆ ಕಡ್ಡಾಯ
- ಗ್ರಾಮಾಂತರದವರಿಗೆ ವಾರ್ಷಿಕ ಆದಾಯ ಮಿತಿ: ₹98,000
- ನಗರ ಪ್ರದೇಶದವರಿಗೆ: ₹1,20,000
- ಮಹಿಳೆಗಳಿಗೆ 33%, ವಿಕಲಚೇತನರಿಗೆ 5%, ತೃತೀಯ ಲಿಂಗಿಗಳಿಗೆ 1% ಮೀಸಲಾತಿ
VISHWAKARMA COMMUNITIES Loan Schemes: ಅರ್ಜಿಸಲ್ಲಿಸುವ ವಿಧಾನ:
- ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬೇಕು
- ಬೆಂಗಳೂರು-ಒನ್, ಕರ್ನಾಟಕ-ಒನ್, ಆತಲ್ ಜನಸ್ನೇಹಿ ಕೇಂದ್ರಗಳಲ್ಲಿ ಸಹ ಸಹಾಯ ಲಭ್ಯವಿದೆ
- ಅರ್ಜಿ ಸಲ್ಲಿಸುವಾಗ ಆಧಾರ್, ಜಾತಿ, ಆದಾಯ ಪ್ರಮಾಣಪತ್ರ ಮತ್ತು ಬ್ಯಾಂಕ್ ಡೀಟೇಲ್ಸ್ ಒಂದೇ ರೀತಿಯಲ್ಲಿ ಇರಬೇಕು
ಪ್ರಮುಖ ಟಿಪ್ಪಣಿ:
2023-24 ಮತ್ತು 2024-25ರಲ್ಲಿ ಅರ್ಜಿ ಸಲ್ಲಿಸಿದ್ದವರಿಗೂ ಈ ಬಾರಿ ಬೇರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ:
- ನಿಗಮದ ವೆಬ್ಸೈಟ್: https://kvcdcl.karnataka.gov.in
- ದೂರವಾಣಿ: 080-22374848 / 7899899039
- ಸ್ಥಳೀಯ ಜಿಲ್ಲೆಗಳಲ್ಲಿ ಅಭಿವೃದ್ಧಿ ನಿಗಮದ ಕಚೇರಿಯನ್ನು ಸಂಪರ್ಕಿಸಿ
ಸೂಚನೆ: ಯೋಜನೆಗಳ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಾದಲ್ಲಿ ಹೊಸ ಮಾರ್ಗಸೂಚಿಯಂತೆ ಜಾರಿಗೆ ತರಲಾಗುತ್ತದೆ.
👉Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್ಗಳಿಗೆ ಸೇರಿ. Click to Join Below Button 👇
ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಓದುಗರಿಗೆ ತಲುಪಿಸುತ್ತಿದ್ದಾರೆ.
ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.