Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ಬೇಸಿಗೆಯಲ್ಲಿಯೇ ಯಾಕೆ ಕಿಡ್ನಿ ಸ್ಟೋನ್ ಕಾಟ ಶುರುವಾಗುತ್ತೆ? ಈ 5 ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!

  • Picture of Gundijalu Shwetha By Gundijalu Shwetha
  • Published On: March 26, 2026
Kidney Stones: ಬೇಸಿಗೆಯಲ್ಲಿಯೇ ಯಾಕೆ ಕಿಡ್ನಿ ಸ್ಟೋನ್ ಕಾಟ ಶುರುವಾಗುತ್ತೆ? ಈ 5 ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!

ಬೇಸಿಗೆಯಲ್ಲಿ ಕಿಡ್ನಿ ಕಲ್ಲುಗಳ (Kidney Stones) ಸಮಸ್ಯೆ ಏಕೆ ಹೆಚ್ಚಾಗುತ್ತದೆ? ನಿರ್ಜಲೀಕರಣವೇ ಇದಕ್ಕೆ ಮುಖ್ಯ ಕಾರಣ. ಕಿಡ್ನಿಯಲ್ಲಿ ಕಲ್ಲುಗಳಾಗುವುದನ್ನು ತಡೆಯಲು ಎಷ್ಟು ನೀರು ಕುಡಿಯಬೇಕು? ಪಾಲಕ್, ಟೊಮ್ಯಾಟೊ ಸೇರಿದಂತೆ ಯಾವೆಲ್ಲಾ ಆಹಾರಗಳನ್ನು ದೂರವಿಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಓದಿ.

ಬೇಸಿಗೆಯಲ್ಲಿ ಕಿಡ್ನಿ ಕಲ್ಲುಗಳ (Kidney Stones) ಕಾಟವೇಕೆ? ಕಾರಣ, ತಡೆಗಟ್ಟುವಿಕೆ ಮತ್ತು ಅಪ್ಪಿತಪ್ಪಿಯೂ ತಿನ್ನಬಾರದ ಆಹಾರಗಳ ಲಿಸ್ಟ್ ಇಲ್ಲಿದೆ!

ನಮಸ್ಕಾರ ಕರುನಾಡಿನ ಜನತೆಗೆ. ಇತ್ತೀಚಿನ ದಿನಗಳಲ್ಲಿ ನನ್ನ ಕ್ಲಿನಿಕ್‌ಗೆ ಒಬ್ಬ ರೋಗಿ ವಿಪರೀತ ಹೊಟ್ಟೆನೋವು ಎಂದು ಒದ್ದಾಡಿಕೊಂಡು ಬಂದಿದ್ದ. ಅವನನ್ನು ಪರೀಕ್ಷಿಸಿ, ಹಿಂದಿನ ದಿನ ಏನು ತಿಂದಿದ್ದೆ ಎಂದು ಕೇಳಿದಾಗ ಆತ ಒಂದು ವಿಚಿತ್ರವಾದ ಕಥೆ ಹೇಳಿದ. “ಡಾಕ್ಟ್ರೆ, ಎರಡು ಮೂರು ದಿನಗಳ ಹಿಂದೆ ಕಡಲೆಬೇಳೆ ಪಲ್ಯ ತಿನ್ನುವಾಗ ಸಣ್ಣ ಕಲ್ಲೊಂದು ಸಿಕ್ಕಿ ಹೊಟ್ಟೆಯೊಳಗೆ ಹೋಗಿತ್ತು. ಈಗ ಅದೇ ಕಲ್ಲು ನನ್ನ ಕಿಡ್ನಿಯಲ್ಲಿ ಸಿಕ್ಕಿಹಾಕಿಕೊಂಡಿದೆ” ಎಂದು ಆತ ಬಲವಾಗಿ ನಂಬಿದ್ದ!

WhatsApp Channel
Join Now
Telegram Channel
Join Now

ಇದು ಕೇವಲ ಆತನೊಬ್ಬನ ಕಥೆಯಲ್ಲ, ನಮ್ಮಲ್ಲಿ ಎಷ್ಟೋ ಜನರಿಗೆ ಕಿಡ್ನಿ ಕಲ್ಲುಗಳ (Kidney Stones) ಬಗ್ಗೆ ಇಂತಹದ್ದೇ ತಪ್ಪು ಕಲ್ಪನೆಗಳಿವೆ. ನಾವು ತಿನ್ನುವಾಗ ಅರಿವಿಲ್ಲದೆ ನುಂಗುವ ಸಣ್ಣ ಮರಳು, ಮಣ್ಣು ಅಥವಾ ಕಲ್ಲುಗಳು ಕಿಡ್ನಿಗೆ ಹೋಗಿ ಸೇರಿಕೊಳ್ಳುತ್ತವೆ ಎಂದು ಬಹಳಷ್ಟು ಜನ ಅಂದುಕೊಂಡಿದ್ದಾರೆ. ಆದರೆ, ವೈದ್ಯಕೀಯ ವಿಜ್ಞಾನ ಹೇಳುವ ಸತ್ಯವೇ ಬೇರೆ. ಬನ್ನಿ, ಕಿಡ್ನಿಯಲ್ಲಿ ಕಲ್ಲು ಹೇಗೆ ಆಗುತ್ತದೆ? ಬೇಸಿಗೆ ಕಾಲದಲ್ಲೇ ಇದು ಏಕೆ ಹೆಚ್ಚು? ಮತ್ತು ಈ ಸಮಸ್ಯೆಯಿದ್ದವರು ಯಾವ ಆಹಾರಗಳನ್ನು ಮುಟ್ಟಲೇಬಾರದು ಎಂಬುದನ್ನು ಸರಳವಾಗಿ, ನಿಮ್ಮ ಭಾಷೆಯಲ್ಲಿ ತಿಳಿದುಕೊಳ್ಳೋಣ.

ಕಿಡ್ನಿಯಲ್ಲಿ ಕಲ್ಲು ಹೇಗೆ ಉಂಟಾಗುತ್ತದೆ? (Kidney stones Causes)

ನಮ್ಮ ದೇಹದೊಳಗಿನ ಪ್ರಮುಖ ಫಿಲ್ಟರ್ ಅಂದರೆ ಅದು ಕಿಡ್ನಿ (ಮೂತ್ರಪಿಂಡ). ನಮ್ಮ ಕಿಡ್ನಿಯು ಪ್ರತಿನಿತ್ಯ ಬರೋಬ್ಬರಿ 150 ರಿಂದ 180 ಲೀಟರ್ ರಕ್ತವನ್ನು ಶೋಧಿಸಿ, ಅದರಲ್ಲಿರುವ ವಿಷಕಾರಿ ಪದಾರ್ಥಗಳನ್ನು ಮೂತ್ರದ ಮೂಲಕ ಹೊರಹಾಕುತ್ತಲೇ ಇರುತ್ತದೆ.

ನಾವು ತಿನ್ನುವ ಆಹಾರದ ಮೂಲಕ ನಮ್ಮ ಹೊಟ್ಟೆ ಸೇರಿದ ಹೊರಗಿನ ಕಲ್ಲುಗಳು ಕಿಡ್ನಿಯಲ್ಲಿ ಶೇಖರಣೆಯಾಗುವುದಿಲ್ಲ. ಬದಲಾಗಿ, ನಮ್ಮ ದೇಹದೊಳಗೇ ಉತ್ಪತ್ತಿಯಾಗುವ ‘ಕ್ಯಾಲ್ಸಿಯಂ’ ಮತ್ತು ‘ಯೂರಿಕ್ ಆಸಿಡ್’ (Uric Acid kidney stones) ನಂತಹ ಖನಿಜಗಳಿಂದ ಈ ಕಲ್ಲುಗಳು ರೂಪುಗೊಳ್ಳುತ್ತವೆ! ಕಿಡ್ನಿಯು ಪ್ರತಿನಿತ್ಯ ಸಣ್ಣ ಸಣ್ಣ ‘ಕ್ಯಾಲ್ಸಿಯಂ ಆಕ್ಸಲೇಟ್’ (Calcium Oxalate kidney stones) ಎಂಬ ಕಣಗಳನ್ನು ಮೂತ್ರದ ಮೂಲಕ ಹೊರಹಾಕುತ್ತದೆ. ಈ ಕಣಗಳು ಕಣ್ಣಿಗೆ ಕಾಣದಷ್ಟು ಚಿಕ್ಕದಿರುವಾಗ ಮೂತ್ರನಾಳದ ಮೂಲಕ ಸಾಗಿದರೂ ನಮಗೆ ಯಾವುದೇ ನೋವಾಗುವುದಿಲ್ಲ.

ಆದರೆ, ಯಾವಾಗ ಈ ಕ್ಯಾಲ್ಸಿಯಂ ಕಣಗಳು ಒಂದಕ್ಕೊಂದು ಅಂಟಿಕೊಂಡು 6 ಮಿ.ಮೀ. ಗಿಂತ ದೊಡ್ಡದಾಗುತ್ತವೆಯೋ, ಆಗ ಅವು ಮೂತ್ರನಾಳದಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಆಗ ಮೂತ್ರ ವಿಸರ್ಜನೆ ಮಾಡುವಾಗ ಅಸಾಧ್ಯವಾದ ಉರಿ, ವಿಪರೀತ ಹೊಟ್ಟೆನೋವು ಮತ್ತು ವಾಂತಿ ಬರುವ ಅನುಭವವಾಗುತ್ತದೆ. ಇದನ್ನೇ ನಾವು ಕಿಡ್ನಿ ಸ್ಟೋನ್ ಎಂದು ಕರೆಯುತ್ತೇವೆ.

Kidney Stones: ಬೇಸಿಗೆಯಲ್ಲಿಯೇ ಯಾಕೆ ಕಿಡ್ನಿ ಸ್ಟೋನ್ ಕಾಟ ಶುರುವಾಗುತ್ತೆ? ಈ 5 ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!

ಬೇಸಿಗೆಯಲ್ಲಿಯೇ ಕಿಡ್ನಿ ಸ್ಟೋನ್ ಕಾಟ ಏಕೆ ಹೆಚ್ಚು?

ಒಬ್ಬ ಆರೋಗ್ಯವಂತ ಮನುಷ್ಯ ಪ್ರತಿದಿನ ಕನಿಷ್ಠ 3 ರಿಂದ 4 ಲೀಟರ್ ನೀರು ಕುಡಿಯಲೇಬೇಕು. ಆದರೆ ಬೇಸಿಗೆ ಕಾಲದಲ್ಲಿ ವಿಪರೀತ ಬಿಸಿಲಿನಿಂದಾಗಿ ನಾವು ಅತಿ ಹೆಚ್ಚು ಬೆವರುತ್ತೇವೆ. ಬೆವರಿನ ಮೂಲಕ ನಮ್ಮ ದೇಹದ ನೀರಿನಂಶ ಖಾಲಿಯಾಗುತ್ತದೆ. ಈ ದ್ರವದ ನಷ್ಟವನ್ನು ಸರಿದೂಗಿಸಲು ನಾವು ಸಾಕಷ್ಟು ನೀರು ಕುಡಿಯದಿದ್ದರೆ, ಅದು ದೇಹದ ನಿರ್ಜಲೀಕರಣಕ್ಕೆ (Dehydration) ಕಾರಣವಾಗುತ್ತದೆ.

ದೇಹದಲ್ಲಿ ನೀರು ಕಡಿಮೆಯಾದಾಗ ಮೂತ್ರದ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಮೂತ್ರದ ಸಾಂದ್ರತೆ (ಹಳದಿ ಬಣ್ಣ) ಹೆಚ್ಚಾಗುತ್ತದೆ. ಮೂತ್ರದಲ್ಲಿ ನೀರಿನಂಶ ಕಡಿಮೆಯಾದಾಗ, ಅದರೊಳಗಿರುವ ಕ್ಯಾಲ್ಸಿಯಂ ಮತ್ತು ಖನಿಜಗಳು ಕರಗದೆ ಒಂದಕ್ಕೊಂದು ಅಂಟಿಕೊಂಡು ಕಲ್ಲುಗಳಾಗಲು (Kidney stones formation) ಶುರುವಾಗುತ್ತವೆ. ನಿರ್ಜಲೀಕರಣದಿಂದಾಗಿ ಯೂರಿಕ್ ಆಸಿಡ್ ಮಟ್ಟವೂ ಹೆಚ್ಚಾಗಿ ಯೂರಿಕ್ ಆಸಿಡ್ ಕಲ್ಲುಗಳು ರೂಪುಗೊಳ್ಳುವ ಅಪಾಯವಿರುತ್ತದೆ.

ಇದಕ್ಕೆ ಚಿಕಿತ್ಸೆ ಏನು? ತಡೆಗಟ್ಟುವುದು ಹೇಗೆ?

ಸಣ್ಣ ಕಲ್ಲುಗಳಾಗಿದ್ದರೆ ವೈದ್ಯರು ಕೊಡುವ ಮಾತ್ರೆ ಮತ್ತು ಔಷಧಗಳಿಂದ ಕರಗಿ ಮೂತ್ರದ ಮೂಲಕವೇ ಹೊರಬರುತ್ತವೆ. ಆದರೆ ಕಲ್ಲುಗಳು ತುಂಬಾ ದೊಡ್ಡದಾಗಿದ್ದರೆ ಲಿಥೋಟ್ರಿಪ್ಸಿ (Lithotripsy) ಅಥವಾ ಯುರೆಟೆರೋಸ್ಕೋಪಿ (Ureteroscopy) ಎಂಬ ಲೇಸರ್ ಚಿಕಿತ್ಸೆಗಳ ಮೂಲಕ ಅವುಗಳನ್ನು ಒಡೆದು ತೆಗೆಯಬೇಕಾಗುತ್ತದೆ.

ಕಿಡ್ನಿ ಕಲ್ಲು ಬರದಂತೆ ತಡೆಯುವ ಸಿಂಪಲ್ ಟಿಪ್ಸ್:

  • ಪ್ರತಿದಿನ ಕನಿಷ್ಠ 3 ರಿಂದ 4 ಲೀಟರ್ ಶುದ್ಧ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ.
  • ನಿಮ್ಮ ಮೂತ್ರದ ಬಣ್ಣವನ್ನು ನೀವೇ ಪರೀಕ್ಷಿಸುತ್ತಿರಿ. ಆರೋಗ್ಯವಂತ ಮೂತ್ರವು ನೀರಿನಂತೆ ಸ್ಪಷ್ಟವಾಗಿ ಅಥವಾ ತಿಳಿ ಹಳದಿ ಬಣ್ಣದಲ್ಲಿರಬೇಕು. ಮೂತ್ರ ಕಡು ಹಳದಿ ಬಣ್ಣದಲ್ಲಿದ್ದರೆ ನೀವು ಸರಿಯಾಗಿ ನೀರು ಕುಡಿಯುತ್ತಿಲ್ಲ ಎಂದರ್ಥ.
  • ಸಿಟ್ರಸ್ ಹಣ್ಣುಗಳಾದ ನಿಂಬೆಹಣ್ಣು, ಕಿತ್ತಳೆ, ಮೂಸಂಬಿ ಮತ್ತು ಎಳನೀರನ್ನು ಹೆಚ್ಚಾಗಿ ಸೇವಿಸಿ.

ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಈ ಆಹಾರಗಳನ್ನು ತಿನ್ನಬೇಡಿ!

ಒಮ್ಮೆ ಕಿಡ್ನಿಯಲ್ಲಿ ಕಲ್ಲು ಬಂದು ಒದ್ದಾಡಿದವರು ಅಥವಾ ಈ ಮೊದಲೇ ಸಮಸ್ಯೆಯಿದ್ದವರು ತಮ್ಮ ಆಹಾರ ಪದ್ಧತಿಯಲ್ಲಿ (Kidney Stone Diet) ಬಹಳ ಎಚ್ಚರಿಕೆ ವಹಿಸಬೇಕು. ಈ 5 ಆಹಾರಗಳು ಕಿಡ್ನಿ ಕಲ್ಲುಗಳನ್ನು ಮತ್ತಷ್ಟು ದೊಡ್ಡದು ಮಾಡುತ್ತವೆ:

1. ಪಾಲಕ್ ಸೊಪ್ಪು (Spinach): ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ, ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಇದೇ ಪಾಲಕ್ ಸೊಪ್ಪಿನಲ್ಲಿ ‘ಆಕ್ಸಲೇಟ್’ (Oxalate) ಅಂಶ ವಿಪರೀತವಾಗಿದೆ. ಇದು ದೇಹದ ಕ್ಯಾಲ್ಸಿಯಂ ಜೊತೆ ಸೇರಿ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳಾಗಿ ಬದಲಾಗುತ್ತದೆ! ಹಾಗಾಗಿ ಕಿಡ್ನಿ ಸಮಸ್ಯೆಯಿದ್ದವರು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಸ್ವಲ್ಪವೇ ಪಾಲಕ್ ತಿನ್ನಬೇಕು.

2. ಟೊಮ್ಯಾಟೊ ಹಣ್ಣು (Tomatoes): ನಮ್ಮ ದೈನಂದಿನ ಅಡುಗೆಯಲ್ಲಿ ಟೊಮ್ಯಾಟೊ ಇಲ್ಲದೆ ನಡೆಯುವುದೇ ಇಲ್ಲ. ಆದರೆ ಟೊಮ್ಯಾಟೊ ಬೀಜಗಳಲ್ಲಿಯೂ ಆಕ್ಸಲೇಟ್ ಅಂಶವಿರುತ್ತದೆ. ಸಂಪೂರ್ಣವಾಗಿ ಟೊಮ್ಯಾಟೊ ಬಿಡಲು ಸಾಧ್ಯವಿಲ್ಲದಿದ್ದರೂ, ಕಿಡ್ನಿ ಸ್ಟೋನ್ ಇದ್ದವರು ಟೊಮ್ಯಾಟೊ ಹಣ್ಣಿನ ಬೀಜಗಳನ್ನು ತೆಗೆದುಹಾಕಿ ಕೇವಲ ಸಿಪ್ಪೆ ಮತ್ತು ರಸವನ್ನು ಮಾತ್ರ ಅಡುಗೆಗೆ ಬಳಸುವುದು ಸೇಫ್.

3. ಚಹಾ ಮತ್ತು ಕಾಫಿ (Tea and Coffee): ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವುದು, ಆಫೀಸ್‌ನಲ್ಲಿ ದಿನಕ್ಕೆ ನಾಲ್ಕೈದು ಬಾರಿ ಚಹಾ ಕುಡಿಯುವುದು ಮಾಮೂಲಿ. ಆದರೆ ಟೀ ಮತ್ತು ಕಾಫಿಯಲ್ಲಿರುವ ಆಕ್ಸಲೇಟ್ ಅಂಶಗಳು ಕಿಡ್ನಿ ಕಲ್ಲುಗಳು ದೊಡ್ಡದಾಗಿ ಬೆಳೆಯಲು ಸಹಾಯ ಮಾಡುತ್ತವೆ. ಹಾಗಾಗಿ ದಿನಕ್ಕೆ ಒಂದೆರಡು ಕಪ್‌ಗೆ ನಿಮ್ಮ ಟೀ-ಕಾಫಿ ಅಭ್ಯಾಸವನ್ನು ಮಿತಿಗೊಳಿಸಿ.

4. ಚಾಕೊಲೇಟ್ಸ್ (Chocolates): ಚಾಕೊಲೇಟ್ ತಿಂದರೆ ಕೇವಲ ಹಲ್ಲು ಹುಳುಕಾಗುವುದಿಲ್ಲ, ಕಿಡ್ನಿಗೂ ಕಂಟಕವಿದೆ. ಇದರಲ್ಲಿರುವ ಆಕ್ಸಲೇಟ್ ಅಂಶಗಳು ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತವೆ. ಹಾಗಾಗಿ ಚಾಕೊಲೇಟ್ ಪ್ರಿಯರು ಇದನ್ನು ಕಡಿಮೆ ಮಾಡುವುದು ಒಳಿತು.

5. ಅತಿಯಾದ ಉಪ್ಪು ಮತ್ತು ಸಮುದ್ರಾಹಾರ (High Salt & Seafood): ಉಪ್ಪಿನಲ್ಲಿರುವ ‘ಸೋಡಿಯಂ’ (Sodium) ಅಂಶವು ಮೂತ್ರದಲ್ಲಿ ಕ್ಯಾಲ್ಸಿಯಂ ವಿಸರ್ಜನೆಯನ್ನು ಹೆಚ್ಚಿಸುತ್ತದೆ, ಇದು ನೇರವಾಗಿ ಕಲ್ಲುಗಳಾಗಲು ಕಾರಣವಾಗುತ್ತದೆ. ಹಾಗಾಗಿ ಊಟದಲ್ಲಿ ಉಪ್ಪನ್ನು ಹಿತಮಿತವಾಗಿ ಬಳಸಿ. ಪ್ಯಾಕ್ ಮಾಡಿದ, ಸಂಸ್ಕರಿಸಿದ ಜಂಕ್ ಫುಡ್‌ಗಳಲ್ಲಿ ಉಪ್ಪು ಹೆಚ್ಚಿರುವುದರಿಂದ ಅವುಗಳನ್ನು ತ್ಯಜಿಸಿ. ಅದೇ ರೀತಿ ಸಮುದ್ರಾಹಾರಗಳಲ್ಲಿ (Seafood/Fish) ಪ್ರೊಟೀನ್ ಜೊತೆಗೆ ಪ್ಯೂರಿನ್ (Purine) ಅಂಶವಿರುತ್ತದೆ. ಇದು ದೇಹದಲ್ಲಿ ಯೂರಿಕ್ ಆಸಿಡ್ ಉತ್ಪತ್ತಿಯನ್ನು ಹೆಚ್ಚು ಮಾಡಿ ಕಲ್ಲುಗಳ ರೂಪ ಪಡೆದುಕೊಳ್ಳುತ್ತದೆ.

ಇದರ ಜೊತೆಗೆ ಕಡಲೆಬೀಜ, ಬೀಟ್‌ರೂಟ್, ಸಿಹಿ ಗೆಣಸು ಇತ್ಯಾದಿಗಳಲ್ಲಿ ಕೂಡ ಆಕ್ಸಲೇಟ್ ಹೆಚ್ಚಿರುವುದರಿಂದ ಇವುಗಳಿಂದ ದೂರ ಉಳಿಯುವುದು ಒಳ್ಳೆಯದು. ಬಿಸಿಲಿನ ತಾಪಕ್ಕೆ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ, ನಿಮ್ಮ ಕಿಡ್ನಿಯನ್ನು ಸೇಫ್ ಆಗಿಟ್ಟುಕೊಳ್ಳಿ!

Read More Science and Health Tips

  • Kidney Failure Signs: ಎಚ್ಚರ! ಸದ್ದಿಲ್ಲದೇ ಜೀವ ಹಿಂಡುತ್ತಿದೆ ಕಿಡ್ನಿ ಕಾಯಿಲೆ; ಆರಂಭದಲ್ಲೇ ಇದನ್ನು ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಪ್ರಮುಖ 10 ಲಕ್ಷಣಗಳು!

ಇಂತಹ ಆರೋಗ್ಯ ಮತ್ತು ಹೆಲ್ತ್ ಟಿಪ್ಸ್ ಗಳ ಬಗ್ಗೆ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

Petrol Diesel Excise Duty Cut:ಪೆಟ್ರೋಲ್/ ಡೀಸೆಲ್ ಮೇಲಿನ ಸುಂಕ ದಿಢೀರ್ 10 ರೂ. ಕಡಿತ! ವಾಹನ ಸವಾರರಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್

ಪೆಟ್ರೋಲ್/ ಡೀಸೆಲ್ ಮೇಲಿನ ಸುಂಕ ದಿಢೀರ್ 10 ರೂ. ಕಡಿತ! ವಾಹನ ಸವಾರರಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್

Sringeri Mutt Ramayana Exam 2026: ರಾಮಾಯಣ ಪರೀಕ್ಷೆ ಬರೆಯಿರಿ! ₹50,000 ಗೆಲ್ಲಿರಿ! ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಬಂಪರ್ ಆಫರ್! ಪರೀಕ್ಷೆಗೆ ಅಪ್ಲೈ ಮಾಡೋದು ಹೇಗೆ?

ರಾಮಾಯಣ ಪರೀಕ್ಷೆ ಬರೆಯಿರಿ! ₹50ಸಾವಿರ ಗೆಲ್ಲಿರಿ! ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಬಂಪರ್ ಆಫರ್! ಪರೀಕ್ಷೆಗೆ ಅಪ್ಲೈ ಮಾಡೋದು ಹೇಗೆ?

1st Standard Age Limit Relaxation : ಪೋಷಕರಿಗೆ ಬಿಗ್ ರಿಲೀಫ್: 1ನೇ ತರಗತಿ ಶಾಲಾ ದಾಖಲಾತಿ ವಯೋಮಿತಿಯಲ್ಲಿ 60 ದಿನ ಸಡಿಲಿಕೆ!

ಪೋಷಕರಿಗೆ ಬಿಗ್ ರಿಲೀಫ್: 1ನೇ ತರಗತಿ ಶಾಲಾ ದಾಖಲಾತಿ ವಯೋಮಿತಿಯಲ್ಲಿ 60 ದಿನ ಸಡಿಲಿಕೆ!

Agniveer Reservation: ಅಗ್ನಿವೀರರಿಗೆ ಬಂಪರ್ ಆಫರ್: 4 ವರ್ಷದ ಸೇವೆ ನಂತ್ರ ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಶೇ.20ರಷ್ಟು ಮೀಸಲಾತಿ!

ಅಗ್ನಿವೀರರಿಗೆ ಬಂಪರ್ ಆಫರ್: 4 ವರ್ಷದ ಸೇವೆ ನಂತ್ರ ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಶೇ.20ರಷ್ಟು ಮೀಸಲಾತಿ!

Kidney Stones: ಬೇಸಿಗೆಯಲ್ಲಿಯೇ ಯಾಕೆ ಕಿಡ್ನಿ ಸ್ಟೋನ್ ಕಾಟ ಶುರುವಾಗುತ್ತೆ? ಈ 5 ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!

ಬೇಸಿಗೆಯಲ್ಲಿಯೇ ಯಾಕೆ ಕಿಡ್ನಿ ಸ್ಟೋನ್ ಕಾಟ ಶುರುವಾಗುತ್ತೆ? ಈ 5 ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!

PrevPreviousಬೆಂಗಳೂರಿನ ಪ್ರತಿಷ್ಠಿತ ಐಐಎಂ (IIMB) ನಲ್ಲಿ ಭರ್ಜರಿ ಉದ್ಯೋಗಾವಕಾಶ! ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ಇಂದೇ ಅರ್ಜಿ ಹಾಕಿ!
Nextಅಗ್ನಿವೀರರಿಗೆ ಬಂಪರ್ ಆಫರ್: 4 ವರ್ಷದ ಸೇವೆ ನಂತ್ರ ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಶೇ.20ರಷ್ಟು ಮೀಸಲಾತಿ!Next
Coffee Estate Labour Crisis: SIR ಎಫೆಕ್ಟ್ ನಿಂದ ಕಾಫಿ ತೋಟಗಳು ಖಾಲಿ ಖಾಲಿ! ಕಾಫಿ ನಾಡಿನಿಂದ ತವರಿಗೆ ಓಡುತ್ತಿರುವ ಅಸ್ಸಾಂ ಕಾರ್ಮಿಕರು! ಸ್ಥಳೀಯ ಕಾರ್ಮಿಕರಿಗೆ ಡಿಮ್ಯಾಂಡ್!

SIR ಎಫೆಕ್ಟ್ ನಿಂದ ಕಾಫಿ ತೋಟಗಳು ಖಾಲಿ ಖಾಲಿ! ಕಾಫಿ ನಾಡಿನಿಂದ ತವರಿಗೆ ಓಡುತ್ತಿರುವ ಅಸ್ಸಾಂ ಕಾರ್ಮಿಕರು! ಸ್ಥಳೀಯ ಕಾರ್ಮಿಕರಿಗೆ ಡಿಮ್ಯಾಂಡ್!

10 February 2026
Read More »
Karnataka State Handicrafts Awards 2026: ನೀವು ಶಿಲ್ಪಿಗಳೇ? ಚಿತ್ರ ಕಲಾವಿದರೇ? ಹಾಗಿದ್ರೆ ಈ ಪ್ರಶಸ್ತಿ ನಿಮಗಾಗಿಯೇ! ಕರ್ನಾಟಕ ರಾಜ್ಯ ಕರಕುಶಲ ಪ್ರಶಸ್ತಿ 2026ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ: ಇಂದೇ ಅರ್ಜಿ ಹಾಕಿ!

ನೀವು ಶಿಲ್ಪಿಗಳೇ? ಚಿತ್ರ ಕಲಾವಿದರೇ? ಹಾಗಿದ್ರೆ ಈ ಪ್ರಶಸ್ತಿ ನಿಮಗಾಗಿಯೇ! ಕರ್ನಾಟಕ ರಾಜ್ಯ ಕರಕುಶಲ ಪ್ರಶಸ್ತಿ 2026ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ: ಇಂದೇ ಅರ್ಜಿ ಹಾಕಿ!

10 February 2026
Read More »
Crop Survey Status Check: ರೈತರೇ ಎಚ್ಚರ! ಫೆಬ್ರವರಿ 15ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಬರೋಲ್ಲ! ಮೊಬೈಲ್‌ನಲ್ಲೇ ಬೆಳೆ ದರ್ಶಕ ಆ್ಯಪ್ ಬಳಸಿ ಸ್ಟೇಟಸ್ ಚೆಕ್ ಮಾಡಿ!

ರೈತರೇ ಎಚ್ಚರ! ಫೆಬ್ರವರಿ 15ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಬರೋಲ್ಲ! ಮೊಬೈಲ್‌ನಲ್ಲೇ ಬೆಳೆ ದರ್ಶಕ ಆ್ಯಪ್ ಬಳಸಿ ಸ್ಟೇಟಸ್ ಚೆಕ್ ಮಾಡಿ!

9 February 2026
Read More »
Page1 … Page41 Page42 Page43 Page44 Page45 … Page103
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs