KVLDCL Karnataka Loan Schemes:2025-26ನೇ ಸಾಲಿಗೆ ವೀರಶೈವ-ಲಿಂಗಾಯತ ಸಮುದಾಯದ ಜನರಿಗೆ ವಿಶೇಷ ಯೋಜನೆಗಳ ಘೋಷಣೆ – ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

KVLDCL Karnataka Loan Schemes:2025-26ನೇ ಸಾಲಿಗೆ ವೀರಶೈವ-ಲಿಂಗಾಯತ ಸಮುದಾಯದ ಜನರಿಗೆ ವಿಶೇಷ ಯೋಜನೆಗಳ ಘೋಷಣೆ – ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ
Share and Spread the love

KVLDCL Karnataka Loan Schemes:2025-26ನೇ ಸಾಲಿಗೆ ವೀರಶೈವ-ಲಿಂಗಾಯತ ಸಮುದಾಯದ ಜನರಿಗೆ ವಿಶೇಷ ಯೋಜನೆಗಳ ಘೋಷಣೆ – ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ! ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ. ಕರ್ನಾಟಕ ರಾಜ್ಯ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ (Veerashaiva Lingayat Loan Scheme) ದಿಂದ ನೀಡುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ, ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಮಾಹಿತಿ ನಿಮಗೆ ಉಪಯೋಗ ಅಗಲಿದೆ.

Follow Us Section

ಬೆಂಗಳೂರು, ಜೂನ್ 2, 2025 – ಕರ್ನಾಟಕ ರಾಜ್ಯ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ವಿವಿಧ ಸಹಾಯಧನ ಮತ್ತು ಸಾಲ ಯೋಜನೆಗಳನ್ನು ಪ್ರಕಟಿಸಲಾಗಿದೆ. ಸಮುದಾಯದ ಸಾಮಾಜಿಕ-ಆರ್ಥಿಕ ಸ್ಥಿತಿ ಸುಧಾರಣೆಗೆ ಗುರಿಯಾಗಿರುವ ಈ ಯೋಜನೆಗಳು ಶಿಕ್ಷಣ, ಕೃಷಿ, ಸ್ವಯಂ ಉದ್ಯೋಗ, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿಯ ಕ್ಷೇತ್ರಗಳಲ್ಲಿ ನೆರವು ನೀಡಲಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 30, 2025.


KVLDCL Karnataka Loan Schemes: ಮುಖ್ಯ ಯೋಜನೆಗಳ ವಿವರಗಳು:

1. ಶಿಕ್ಷಣ ಸಾಲ ಯೋಜನೆ:

  • ಸ್ಥಳೀಯ ಶಿಕ್ಷಣ: ಇಂಜಿನಿಯರಿಂಗ್, ವೈದ್ಯಕೀಯ, ದಂತಚಿಕಿತ್ಸೆ ಮೊದಲಾದ ವ್ಯಾಸಂಗಗಳಿಗೆ ಶೇಕಡಾ 2ರ ಬಡ್ಡಿದರದಲ್ಲಿ ಶ್ರೇಷ್ಠ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ರೂ. 1-5 ಲಕ್ಷ ಸಾಲ.
  • ವಿದೇಶಿ ಶಿಕ್ಷಣ: QS World Ranking 1000 ರೊಳಗಿನ ವಿದೇಶಿ ವಿವಿಗಳಲ್ಲಿ ಮಾಸ್ಟರ್ಸ್ ಅಥವಾ ಪಿಎಚ್‌ಡಿಗೆ ಶೂನ್ಯ ಬಡ್ಡಿದರದಲ್ಲಿ ರೂ. 50 ಲಕ್ಷವರೆಗೆ ಸಾಲ.

2. ಜೀವ ಜಲ ಯೋಜನ/ ಕೊಳವೆ ಬಾವಿ ನೀರಾವರಿ ಯೋಜನೆ:

  • ಗ್ರಾಮಾಂತರ: ರೂ. 98,000 / ನಗರ ಪ್ರದೇಶ: ರೂ. 1.20 ಲಕ್ಷ ಆದಾಯದೊಳಗಿನ ರೈತರಿಗೆ.
  • ವಿವಿಧ ಜಿಲ್ಲೆಗಳಲ್ಲಿ 1-5 ಎಕರೆ ಜಮೀನು ಹೊಂದಿರಬೇಕು.
  • Farmers FRUITS ID ಮತ್ತು ಪ್ರಮಾಣಪತ್ರ ಅಗತ್ಯ.

ಇದನ್ನೂ ಓದಿ: Vokkaliaga loan scheme 2025: ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಭರ್ಜರಿ ಯೋಜನೆಗಳು: 2025-26ನೇ ಸಾಲಿಗೆ ಸಾಲ ಸೌಲಭ್ಯಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

3. ಸ್ವಯಂ ಉದ್ಯೋಗ ಯೋಜನೆ:

  • 1 ರಿಂದ 2 ಲಕ್ಷ ರೂ.ವರೆಗೆ ಸಾಲ ಮತ್ತು ಶೇ.4ರ ಬಡ್ಡಿದರದಲ್ಲಿ ರೂ.30,000ರ ಸಹಾಯಧನ.
  • ವಯೋಮಿತಿ: 18-55 ವರ್ಷ.

4. ಹೋಟೆಲ್ (ಖಾನಾವಳಿ) ಉದ್ಯಮಕ್ಕೆ ನೆರವು:

  • ಘಟಕ ವೆಚ್ಚ: ₹5 ಲಕ್ಷ.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ: ರೂ.3.5 ಲಕ್ಷಕ್ಕಿಂತ ಕಡಿಮೆ ಇರಬೇಕು
  • ವಯೋಮಿತಿ: ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.
  • ಸಾಲ: ₹4.60 ಲಕ್ಷ + ₹40,000 ಸಹಾಯಧನ.

5. ವಿಭೂತಿ ಘಟಕ ಸ್ಥಾಪನೆ:

  • ವಿಭೂತಿ ಘಟಕ ವೆಚ್ಚ: ₹4 ಲಕ್ಷ.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ: ರೂ.3.5 ಲಕ್ಷಕ್ಕಿಂತ ಕಡಿಮೆ ಇರಬೇಕು
  • ವಯೋಮಿತಿ: ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.
  • ಶೇ.3 ಬಡ್ಡಿದರದ ಸಾಲ + ₹40,000 ಸಹಾಯಧನ.

6. ಸ್ವಾವಲಂಬಿ ಸಾರಥಿ ಯೋಜನೆ:

  • ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಗೆ 50% ಅಥವಾ ₹3 ಲಕ್ಷವರೆಗೆ ಸಹಾಯಧನ.
  • ವಯೋಮಿತಿ: ವಯಸ್ಸು 21 ರಿಂದ 45 ವರ್ಷಗಳ ಒಳಗಿರಬೇಕು.

7. ಉದ್ಯೋಗ ತರಬೇತಿ (ಸ್ವಾತಂತ್ರ್ಯ ಅಮೃತ ಮಹೋತ್ಸವ):

ಸಮುದಾಯದ ನಿರುದ್ಯೋಗಿ ಅರ್ಹ ಯುವಜನರನ್ನು ಗುರುತಿಸಿ ಕೌಶಾಲ್ಯಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನ ತರಬೇತಿ ಸಂಸ್ಥೆಗಳಾದ (ITI’s, GTTC, KGTTI, ATDC) ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ (VTU) ಇದರ ಕೇಂದ್ರಗಳಾದ ಬೆಂಗಳೂರು, ಮುದ್ದೇನಹಳ್ಳಿ, ದಾಂಡೇಲಿ, ಇಳಕಲ್, ದಾವಣಗೆರೆ, ಕಲಬುರಗಿ ಮತ್ತು ಮೈಸೂರಿನಲ್ಲಿ ಇರುವ ಕೌಶಲ್ಯ ಅಭಿವೃದ್ಧಿ ಕೇಂದ್ರಗಳು ಹಾಗೂ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಗದಗನ ತರಬೇತಿ ಕೇಂದ್ರಗಳ ಮೂಲಕ ಅಲ್ಪಾವಧಿ ಮತ್ತು ಉತ್ಕೃಷ್ಟ ಕೌಶಲ್ಯ ತರಬೇತಿಯನ್ನು ಆಯೋಚಿಸುವ ಯೋಜನೆಯಾಗಿದ್ದು, ಉದ್ಯೋಗಿಮುತುಗಳನ್ನಾಗಿಸಲು ತರಬೇತಿ ಕೊಡಿಸಲಾಗುವುದು

  • ಕೌಶಲ್ಯ ತರಬೇತಿಗಾಗಿ ಶೈಕ್ಷಣಿಕ ಅರ್ಹತೆ: SSLC, PUC, ಡಿಪ್ಲೋಮಾ, ಪದವಿ.
  • ವಯಸ್ಸು 18 ರಿಂದ 25 ವರ್ಷಗಳ ಒಳಗಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ: ರೂ.8 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಅರ್ಜಿ ಲಿಂಕ್: kaushalkar.com ಇಲ್ಲಿ ಅರ್ಜಿ ಸಲ್ಲಿಸಬಹುದು.

8. ಸ್ವ ಸಹಾಯ ಸಂಘಗಳಿಗೆ ಉತ್ತೇಜನ:

  • ಸ್ವ ಸಹಾಯ ಸಂಘಗಳ ಗರಿಷ್ಠ 15 ಸದಸ್ಯರಿಗೆ ತಲಾ ₹15,000 ಸಹಾಯಧನ ಹಾಗೂ ₹25,000 ಸಾಲ.
  • ಶೇ.4 ಬಡ್ಡಿದರದಲ್ಲಿ ನೀಡಲಾಗುವುದು.

9. ಕಾಯಕ ಕಿರಣ ಯೋಜನೆ:

₹ 50,000 (ಇದರ 50% ಅಂದರೆ ₹ 25,000 ಸಹಾಯಧನವಾಗಿ ಪರಿಗಣಿಸಲಾಗುತ್ತದೆ ಮತ್ತು ಉಳಿದ 50% ಅಂದರೆ ₹ 25,000 ಸಾಲವಾಗಿ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗುತ್ತದೆ).

₹ 50,001 ರಿಂದ ₹ 1,00,000 (ಇದರ 50% ಅಂದರೆ ₹ 50,000 ಸಹಾಯಧನವಾಗಿ ಪರಿಗಣಿಸಲಾಗುತ್ತದೆ ಮತ್ತು ಉಳಿದ 50% ಅಂದರೆ ₹ 50,000 ಸಾಲವಾಗಿ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗುತ್ತದೆ).


ಅರ್ಜಿಯ ವಿಧಾನ:

  • ಅರ್ಜಿದಾರರು Seva Sindhu ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
  • Grama One / Karnataka One / Bangalore One ಕೇಂದ್ರಗಳಲ್ಲಿ ಸಹ ಸಹಾಯ ಲಭ್ಯ.
  • ಒಂದು ಕುಟುಂಬದಿಂದ ಒಬ್ಬ ವ್ಯಕ್ತಿಗೆ ಮಾತ್ರ ಒಂದು ಯೋಜನೆಯ ಲಾಭ ಸಿಗುತ್ತದೆ.
  • ಮೊದಲು ಲಾಭ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ವಿಶೇಷ ಸೂಚನೆ:

ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿರಬೇಕು.

ನಿಗಮವು ಅನುಷ್ಠಾನಗೊಳಿಸುವ ಈ ಮೇಲ್ಕಂಡ ಯೋಜನೆಗಳಲ್ಲಿ ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ಅಧ್ಯಕ್ಷರು/ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಬಯಸುವವರೂ ಸಹ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸುವುದು, ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಮೇಲ್ಕಂಡ ಯಾವುದಾದರೂ ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.

ಅರ್ಹ ಫಲಾಪೇಕ್ಷಿಗಳು ಗ್ರಾಮ ಒನ್/ ಬೆಂಗಳೂರು ಒನ್/ಕರ್ನಾಟಕ ಒನ್ ನಾಗರೀಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗಿರುತ್ತದೆ.

ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಸಂಪರ್ಕ ಮಾಹಿತಿ:

  • ವೆಬ್‌ಸೈಟ್: https://kvldcl.karnataka.gov.in
  • ದೂರವಾಣಿ: 080-22865522 / 9900012351 / 9900012352
  • ಜಿಲ್ಲಾಧಿಕಾರಿ ಕಚೇರಿಗಳನ್ನು ಸಂಪರ್ಕಿಸಬಹುದು.

👉Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

🔗Ration Card Cancellation List 2025: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ! ಬಿಪಿಎಲ್ ಕಾರ್ಡ್ ಪಡೆಯಲು ಹೊಸ ಅರ್ಹತೆ ಏನು?

🔗Kisan Credit Card (KCC): ರೈತರಿಗೆ ಬಂಪರ್ ಸುದ್ದಿ – ₹5 ಲಕ್ಷವರೆಗೆ ಭದ್ರತೆ ರಹಿತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ!

🔗2025-26 ಬಜೆಟ್ ಪ್ರಕಾರ ಆಶಾ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಸಿಬ್ಬಂದಿಗೆ ಬಂಪರ್ ಸುದ್ದಿ: ರಾಜ್ಯ ಸರ್ಕಾರದಿಂದ ಗೌರವಧನ ಹೆಚ್ಚಳ!

🔗Krushi Bhagya Scheme 2025:ಕೃಷಿ ಭಾಗ್ಯ ಯೋಜನೆ 2025: ರೈತರಿಗೆ ಸಿಹಿ ಸುದ್ದಿ! ಪಾಲಿಹೌಸ್‌ಗೆ, ಕೃಷಿ ಹೊಂಡ, ಸೂಕ್ಷ್ಮ ನೀರಾವರಿಗೆ ಭಾರಿ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ!

🔗Panchamitra WhatsApp Chat: ಪಂಚಮಿತ್ರ ಸೇವೆ WhatsApp ಮೂಲಕ ನೇರವಾಗಿ ನಿಮ್ಮ ಗ್ರಾಮಪಂಚಾಯಿತಿಯ 15+ ಸರ್ಕಾರಿ ಸೇವೆಗಳನ್ನು ಪಡೆಯಿರಿ!

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Share and Spread the love

Leave a Reply

Your email address will not be published. Required fields are marked *

ಮುಖಪುಟ ಉದ್ಯೋಗ ಶಿಕ್ಷಣ English Blogs