Nijasharana Ambigara Chowdaiah Development Corporation: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ 2025-26ನೇ ಸಾಲಿನ ಯೋಜನೆಗಳಿಗೆ ಅರ್ಜಿ ಆಹ್ವಾನ!

Nijasharana Ambigara Chowdaiah Development Corporation: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ 2025-26ನೇ ಸಾಲಿನ ಯೋಜನೆಗಳಿಗೆ ಅರ್ಜಿ ಆಹ್ವಾನ!
Share and Spread the love

Nijasharana Ambigara Chowdaiah Development Corporation: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ 2025-26ನೇ ಸಾಲಿನ ಯೋಜನೆಗಳಿಗೆ ಅರ್ಜಿ ಆಹ್ವಾನ! ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ. ಕರ್ನಾಟಕ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ (Ambigara Development Loan Scheme) ದಿಂದ ನೀಡುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ, ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಮಾಹಿತಿ ನಿಮಗೆ ಉಪಯೋಗ ಅಗಲಿದೆ.

Follow Us Section

ಮುಖ್ಯ ಅಂಶಗಳು:

  • ಕೊನೆಯ ದಿನಾಂಕ: 04.07.2025
  • ಅರ್ಜಿ ಮಾರ್ಗ: ಸೇವಾ ಸಿಂಧು ಪೋರ್ಟಲ್
  • ಲಭ್ಯ ಯೋಜನೆಗಳು: ಶೈಕ್ಷಣಿಕ ಸಾಲ, ವಿದೇಶಿ ವ್ಯಾಸಂಗ, ನೀರಾವರಿ, ಸ್ವ ಉದ್ಯೋಗ, ಸಾರಥಿ ಯೋಜನೆ
  • ಸಂಪರ್ಕ: ambigaradevelopment.karnataka.gov.in / 080-22864099

📢 ಬಡ ಸಮುದಾಯಗಳ ಸಬಲೀಕರಣದತ್ತ ಇನ್ನೊಂದು ಬಲವಾದ ಹೆಜ್ಜೆ!

ಬೆಂಗಳೂರು, ಜೂನ್ 6, 2025:
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ (ಕರ್ನಾಟಕ ಸರ್ಕಾರ)ವು ಬೆಸ್ತ, ಅಂಬಿಗ, ಗಂಗಾಮತ, ಕಬ್ಬಲಿಗ, ಕೋಲಿ ಮತ್ತು ಉಪಜಾತಿಗಳ (ಪ್ರವರ್ಗ-1ರ 6(0) ರಿಂದ 6(ak) ಒಳಗೊಂಡವರು) ಸಮಗ್ರ ಅಭಿವೃದ್ಧಿಗಾಗಿ 2025-26ನೇ ಸಾಲಿನಲ್ಲಿ ವಿವಿಧ ಕಲ್ಯಾಣ ಹಾಗೂ ಆರ್ಥಿಕ ಸಬಲೀಕರಣ ಯೋಜನೆಗಳನ್ನು ಘೋಷಿಸಿದೆ. ಈ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಫಲಾಪೇಕ್ಷಿಗಳಿಂದ ಜುಲೈ 4, 2025ರ ಸಂಜೆ 5.30 ಗಂಟೆವರೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್ ಬಳಸಬಹುದಾಗಿದೆ.

Nijasharana Ambigara Chowdaiah Development Corporation: ಪ್ರಮುಖ ಯೋಜನೆಗಳು:

1. ಅರಿವು ಶೈಕ್ಷಣಿಕ ಸಾಲ ಯೋಜನೆ

  • ವೃತ್ತಿಪರ, ತಾಂತ್ರಿಕ ಮತ್ತು ಉನ್ನತ ವಿದ್ಯಾಭ್ಯಾಸದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹1 ಲಕ್ಷದವರೆಗೆ ಶೈಕ್ಷಣಿಕ ಸಾಲವನ್ನು ಶೇ.2ರ ಬಡ್ಡಿದರದಲ್ಲಿ ನೀಡಲಾಗುತ್ತದೆ.
  • ಅರ್ಹತಾ ಮಾನದಂಡ: ವಾರ್ಷಿಕ ಆದಾಯ ₹3.5 ಲಕ್ಷದೊಳಗೆ, ವಯೋಮಿತಿ 35 ವರ್ಷ.

2. ವಿದೇಶಿ ಶೈಕ್ಷಣಿಕ ಸಹಾಯ (QS World Ranking 1000 ಒಳಗೊಂಡ ವಿಶ್ವವಿದ್ಯಾಲಯಗಳಿಗೆ ಮಾತ್ರ)

  • ಪಿಹೆಚ್‌ಡಿ, ಮಾಸ್ಟರ್‌ಸ್, ತಾಂತ್ರಿಕ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಶೂನ್ಯ ಬಡ್ಡಿದರದಲ್ಲಿ ₹30 ಲಕ್ಷದವರೆಗೆ ಸಾಲ.
  • ಅರ್ಹತಾ ಮಿತಿ: ವಾರ್ಷಿಕ ಆದಾಯ ₹15 ಲಕ್ಷದೊಳಗೆ, ವಯೋಮಿತಿ ಪಿಹೆಚ್‌ಡಿಗೆ 35 ವರ್ಷ, ಸ್ನಾತಕೋತ್ತರ ವಿದ್ಯಾರ್ಥಿಗೆ 32 ವರ್ಷ.

ಇದನ್ನೂ ಓದಿ: KVLDCL Karnataka Loan Schemes:2025-26ನೇ ಸಾಲಿಗೆ ವೀರಶೈವ-ಲಿಂಗಾಯತ ಸಮುದಾಯದ ಜನರಿಗೆ ವಿಶೇಷ ಯೋಜನೆಗಳ ಘೋಷಣೆ – ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

3. ಗಂಗಾ ಕಲ್ಯಾಣ ನೀರಾವರಿ ಯೋಜನೆ

  • ಕನಿಷ್ಠ 2 ಎಕರೆ ಮತ್ತು ಗರಿಷ್ಠ 5 ಎಕರೆ ಜಮೀನಿನ ಸಣ್ಣ ರೈತರಿಗೆ ಸಹಾಯಧನ ಮತ್ತು ಶೇ.4ರ ಬಡ್ಡಿದರದಲ್ಲಿ ಸಾಲ.
  • ಭಾಗಶಃ ನೀರಾವರಿ ಯೋಜನೆಗೆ ₹4.25 ಲಕ್ಷ ಸಹಾಯಧನ (ಕೆಲವೊಂದು ಜಿಲ್ಲೆಗಳಿಗೆ ₹3.25 ಲಕ್ಷ), ಅಗತ್ಯವಿದ್ದಲ್ಲಿ ₹50,000 ಸಾಲ.

4. ಸ್ವಯಂ ಉದ್ಯೋಗ ಸಹಾಯಧನ ಮತ್ತು ಸಾಲ ಯೋಜನೆ

  • ಸ್ವ ಉದ್ಯೋಗ ಆರಂಭಿಸಲು ₹2 ಲಕ್ಷದವರೆಗೆ ಸಾಲ.
  • ಘಟಕ ವೆಚ್ಚದ ಆಧಾರದ ಮೇಲೆ 15%-20%ರಷ್ಟು ಸಹಾಯಧನ, ಉಳಿದ ಹಣ ಶೇ.4ರ ಬಡ್ಡಿದರದಲ್ಲಿ ಸಾಲ.
  • ವಯೋಮಿತಿ: 18ರಿಂದ 55 ವರ್ಷದೊಳಗೆ.

5. ಸ್ವಾವಲಂಬಿ ಸಾರಥಿ ಯೋಜನೆ

  • ಟ್ಯಾಕ್ಸಿ ಅಥವಾ ಗೂಡ್ಸ್ ವಾಹನ ಖರೀದಿಗೆ ಶೇ.50ರಷ್ಟು ಅಥವಾ ₹3 ಲಕ್ಷದವರೆಗೆ ಸಹಾಯಧನ.
  • 21-45 ವರ್ಷ ವಯಸ್ಸಿನ ನಿರುದ್ಯೋಗಿ ಅರ್ಹರು. ಚಾಲನಾ ಪರವಾನಗಿ ಅವಶ್ಯಕ.

ಇದನ್ನೂ ಓದಿ: Vokkaliaga loan scheme 2025: ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಭರ್ಜರಿ ಯೋಜನೆಗಳು: 2025-26ನೇ ಸಾಲಿಗೆ ಸಾಲ ಸೌಲಭ್ಯಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

ವಿಶೇಷ ಸೂಚನೆಗಳು:

  • ಅರ್ಜಿದಾರರ ಆಧಾರ್ ಮೊಬೈಲ್ ಮತ್ತು ಬ್ಯಾಂಕ್ ಖಾತೆಗೆ ಜೋಡಣೆಯಾಗಿರಬೇಕು.
  • ಒಂದು ಕುಟುಂಬದಿಂದ ಒಬ್ಬರಿಗಷ್ಟೆ ಒಂದು ಯೋಜನೆಗೆ ಅವಕಾಶ.
  • ಕಳೆದ 3 ವರ್ಷಗಳಲ್ಲಿ ಯಾವುದೇ ಸರ್ಕಾರದ ಯೋಜನೆ ಸೌಲಭ್ಯ ಪಡೆದವರೇ ಆಗಿದ್ದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

Nijasharana Ambigara Chowdaiah Development Corporation: ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಫಲಾಪೇಕ್ಷಿಗಳು http://ambigaradevelopment.karnataka.gov.in ಎಂಬ ಅಧಿಕೃತ ವೆಬ್‌ಸೈಟ್‌ ಅಥವಾ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 080-22864099 ಗೆ ಕರೆಮಾಡಬಹುದು ಅಥವಾ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಜಿಲ್ಲಾ ಕಚೇರಿಗಳನ್ನು ಸಂಪರ್ಕಿಸಬಹುದು.

ಸೂಚನೆ: ಯೋಜನೆಗಳ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಾದಲ್ಲಿ ಹೊಸ ಮಾರ್ಗಸೂಚಿಯಂತೆ ಜಾರಿಗೆ ತರಲಾಗುತ್ತದೆ.

👉Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

🔗Ration Card Cancellation List 2025: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ! ಬಿಪಿಎಲ್ ಕಾರ್ಡ್ ಪಡೆಯಲು ಹೊಸ ಅರ್ಹತೆ ಏನು?

🔗Kisan Credit Card (KCC): ರೈತರಿಗೆ ಬಂಪರ್ ಸುದ್ದಿ – ₹5 ಲಕ್ಷವರೆಗೆ ಭದ್ರತೆ ರಹಿತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ!

🔗2025-26 ಬಜೆಟ್ ಪ್ರಕಾರ ಆಶಾ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಸಿಬ್ಬಂದಿಗೆ ಬಂಪರ್ ಸುದ್ದಿ: ರಾಜ್ಯ ಸರ್ಕಾರದಿಂದ ಗೌರವಧನ ಹೆಚ್ಚಳ!

🔗Krushi Bhagya Scheme 2025:ಕೃಷಿ ಭಾಗ್ಯ ಯೋಜನೆ 2025: ರೈತರಿಗೆ ಸಿಹಿ ಸುದ್ದಿ! ಪಾಲಿಹೌಸ್‌ಗೆ, ಕೃಷಿ ಹೊಂಡ, ಸೂಕ್ಷ್ಮ ನೀರಾವರಿಗೆ ಭಾರಿ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ!

🔗Panchamitra WhatsApp Chat: ಪಂಚಮಿತ್ರ ಸೇವೆ WhatsApp ಮೂಲಕ ನೇರವಾಗಿ ನಿಮ್ಮ ಗ್ರಾಮಪಂಚಾಯಿತಿಯ 15+ ಸರ್ಕಾರಿ ಸೇವೆಗಳನ್ನು ಪಡೆಯಿರಿ!

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs