PM Kisan 20th Installment: ಕರ್ನಾಟಕದ ರೈತರಿಗೆ ಜುಲೈ 18ರಂದು ಹಣ ಜಮೆಯಾಗುವ ಸಾಧ್ಯತೆ!

PM Kisan 20th Installment: ಕರ್ನಾಟಕದ ರೈತರಿಗೆ ಜುಲೈ 18ರಂದು ಹಣ ಜಮೆಯಾಗುವ ಸಾಧ್ಯತೆ!
Share and Spread the love

PM Kisan 20th Installment: ಪಿಎಂ ಕಿಸಾನ್ 20ನೇ ಕಂತು ಜುಲೈ 18ಕ್ಕೆ ಕರ್ನಾಟಕದ ರೈತರ ಖಾತೆಗೆ ಜಮೆ ಆಗುವ ನಿರೀಕ್ಷೆಯಿದೆ. ನಿಮ್ಮ ಆಧಾರ್, ಇ-ಕೆವೈಸಿ ಪರಿಶೀಲಿಸಿ ಮತ್ತು ಹಣ ಜಮೆಯಾಗಿದೆಯೇ ಎಂದು pmkisan.gov.in ನಲ್ಲಿ ಪರಿಶೀಲಿಸುವ ಮಾಡುವ ವಿಧಾನ ಮತ್ತು ಇತರ ಎಲ್ಲಾ ಮಾಹಿತಿಗಳನ್ನು ತಿಳಿಯಲು ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ.

Follow Us Section

PM Kisan 20th Installment: ಪಿಎಂ ಕಿಸಾನ್ 20ನೇ ಕಂತು: ಕರ್ನಾಟಕದ ರೈತರಿಗೆ ಜುಲೈ 18ರಂದು ಹಣ ಜಮೆಯಾಗುವ ಸಾಧ್ಯತೆ!

ಬೆಂಗಳೂರು, ಜುಲೈ 17, 2025: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 20ನೇ ಕಂತು ದೇಶಾದ್ಯಂತದ ರೈತರ ಬ್ಯಾಂಕ್ ಖಾತೆಗಳಿಗೆ ನಾಳೆ, ಅಂದರೆ ಜುಲೈ 18, 2025 ರಂದು ನೇರವಾಗಿ ಜಮೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಕಂತು ಕರ್ನಾಟಕದ ರೈತರಿಗೂ ಅನ್ವಯಿಸುತ್ತದೆ. ಬಿಹಾರದ ಮೋತಿಹಾರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ₹2,000 ರೂ.ಗಳ ಈ ಕಂತನ್ನು 9.8 ಕೋಟಿಗೂ ಹೆಚ್ಚು ರೈತರಿಗೆ ವರ್ಗಾಯಿಸುವ ನಿರೀಕ್ಷೆಯಿದೆ.

ಕಂತು ವಿಳಂಬವಾದರೂ, ಹಣ ಜಮೆ ಖಚಿತ: ಪಿಎಂ-ಕಿಸಾನ್ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರಿಗೆ ₹2,000 ಆರ್ಥಿಕ ನೆರವು ನೀಡಲಾಗುತ್ತದೆ. 19ನೇ ಕಂತನ್ನು ಫೆಬ್ರವರಿ 2025 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಬಾರಿ ಜೂನ್‌ನಲ್ಲಿ ಬರಬೇಕಿದ್ದ PM Kisan 20th Installment: ಕಂತು ವಿಳಂಬವಾಗಿದ್ದರೂ, ಜುಲೈ 18 ರಂದು ಬಿಡುಗಡೆಯಾಗಲಿದೆ, ಇದು ರೈತರಲ್ಲಿ ಹೊಸ ಆಶಾಭಾವ ಮೂಡಿಸಿವೆ. ಡಿಬಿಟಿ (ನೇರ ಲಾಭ ವರ್ಗಾವಣೆ) ಮೂಲಕ ಹಣ ಜಮೆಯಾಗುವುದರಿಂದ, ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ರೈತರ ಖಾತೆಗೆ ಹಣ ತಲುಪುತ್ತದೆ.

PM Kisan 20th Installment: ಪಿಎಂ ಕಿಸಾನ್ 20ನೇ ಕಂತು ಕರ್ನಾಟಕದ ರೈತರು ತಮ್ಮ ಕಂತಿನ ಸ್ಥಿತಿ ಪರಿಶೀಲಿಸುವುದು ಹೇಗೆ?

ಕರ್ನಾಟಕದ ರೈತ ಭಾಂದವರೇ ನಿಮ್ಮ 20ನೇ ಕಂತು ಜಮೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಈ ಕೆಳಗಿನ ವಿಧಾನಗಳಲ್ಲಿ ಪರಿಶೀಲಿಸಬಹುದು:

  1. ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://pmkisan.gov.in/
  2. ಮುಖಪುಟದಲ್ಲಿರುವ ‘ಫಾರ್ಮರ್ಸ್ ಕಾರ್ನರ್’ (Farmers Corner) ವಿಭಾಗದಲ್ಲಿ ‘ನೋ ಯುವರ್ ಸ್ಟೇಟಸ್’ (Know Your Status) ಆಯ್ಕೆಯನ್ನು ಕ್ಲಿಕ್ ಮಾಡಿ.
  3. ಹೊಸ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆ (Registration Number), ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯಲ್ಲಿ ಯಾವುದಾದರೂ ಒಂದನ್ನು ನಮೂದಿಸಿ.
  4. ಕ್ಯಾಪ್ಚಾ ಕೋಡ್ ಅನ್ನು ಸರಿಯಾಗಿ ನಮೂದಿಸಿ, ನಂತರ ‘ಡೇಟಾ ಪಡೆಯಿರಿ’ (Get Data) ಅಥವಾ ‘ವರದಿ ಪಡೆಯಿರಿ’ (Get Report) ಬಟನ್ ಮೇಲೆ ಕ್ಲಿಕ್ ಮಾಡಿ.
  5. ನಿಮ್ಮ ಫಲಾನುಭವಿ ಸ್ಥಿತಿ, ಇಲ್ಲಿಯವರೆಗೆ ಜಮೆಯಾಗಿರುವ ಕಂತುಗಳ ವಿವರಗಳು ಮತ್ತು 20ನೇ ಕಂತಿನ ಜಮೆ ಸ್ಥಿತಿ ಪರದೆಯ ಮೇಲೆ ಕಾಣಿಸುತ್ತದೆ.

ಪಿಎಂ ಕಿಸಾನ್ 20ನೇ ಕಂತು ಬರಬೇಕಾದ್ರೆ ರೈತರೇ ಕೆಳಗಿನ ಪ್ರಮುಖ ಸೂಚನೆಗಳನ್ನು ಗಮನಿಸಿ:

  • ಇ-ಕೆವೈಸಿ ಕಡ್ಡಾಯ: ಪಿಎಂ-ಕಿಸಾನ್ ಯೋಜನೆಯಡಿ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ. ಇ-ಕೆವೈಸಿ ಪೂರ್ಣಗೊಳಿಸದಿದ್ದರೆ, ಕಂತು ಜಮೆಯಾಗುವುದಿಲ್ಲ. ನೀವು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಒಟಿಪಿ ಆಧಾರಿತ ಇ-ಕೆವೈಸಿ ಮಾಡಬಹುದು ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡಿ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಬಹುದು.
  • ಆಧಾರ್-ಬ್ಯಾಂಕ್ ಖಾತೆ ಲಿಂಕ್: ನಿಮ್ಮ ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ ಮತ್ತು ನಿಮ್ಮ ಖಾತೆಯಲ್ಲಿ ಡಿಬಿಟಿ ಆಯ್ಕೆ ಸಕ್ರಿಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದು ಹಣ ಜಮೆಯಾಗಲು ಅತ್ಯಗತ್ಯ.
  • ಫಲಾನುಭವಿ ಪಟ್ಟಿ ಪರಿಶೀಲನೆ: ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಪಿಎಂ ಕಿಸಾನ್ ಪೋರ್ಟಲ್‌ನಲ್ಲಿರುವ “ಡ್ಯಾಶ್‌ಬೋರ್ಡ್” ವಿಭಾಗದಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ ಮತ್ತು ಪಂಚಾಯತ್ ಆಯ್ಕೆ ಮಾಡುವ ಮೂಲಕ ಇದನ್ನು ಪರಿಶೀಲಿಸಬಹುದು.

ಕರ್ನಾಟಕ ಸೇರಿದಂತೆ ದೇಶಾದ್ಯಂತದ ರೈತರು ಈ ಕಂತಿನ ಪ್ರಯೋಜನ ಪಡೆಯಲು ತಮ್ಮ ಎಲ್ಲಾ ವಿವರಗಳನ್ನು ನವೀಕೃತವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ನಾಳೆ ಕಂತು ಬಿಡುಗಡೆಯಾದ ಬಳಿಕ ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಎಂದು ಪರಿಶೀಲಿಸಲು ಮರೆಯಬೇಡಿ.

👉Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

🔗PMFBY: ರೈತರಿಗೆ ಕೊನೆಯ ಅವಕಾಶ: ಫಸಲ್ ಬಿಮಾ ನೋಂದಣಿಗೆ ಜುಲೈ 31ರ ಗಡುವು! ಬೆಳೆ ವಿಮೆ ಮಾಡಿಸಿಕೊಳ್ಳಿರಿ ವಿಮಾ ಭದ್ರತೆ ಪಡೆಯಿರಿ!

🔗Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!

🔗Podi Nakashe: ನಿಮ್ಮ ಜಮೀನಿನ ಪೋಡಿ ನಕ್ಷೆ ಈಗ ಮೊಬೈಲ್‌ನಲ್ಲೇ ಪಡೆಯಿರಿ! ಇಲ್ಲಿದೆ ಸಂಪೂರ್ಣ ಸರಳ ವಿಧಾನ

🔗(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 

Follow Us Section
Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs