Power Cut: ಮೆಸ್ಕಾಂ ಪ್ರಕಟಣೆ: ಜೂನ್ 24 ರಂದು ಕಮ್ಮರಡಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ!

Power Cut: ಮೆಸ್ಕಾಂ ಪ್ರಕಟಣೆ: ಜೂನ್ 24 ರಂದು ತೀರ್ಥಹಳ್ಳಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ!
Share and Spread the love

Power Cut: ತೀರ್ಥಹಳ್ಳಿ ತಾಲೂಕಿನ ಗ್ರಾಹಕರ ಗಮನಕ್ಕೆ! ಜೂನ್ 24, ಮಂಗಳವಾರದಂದು 110/11 ಕೆವಿ ಕಮ್ಮರಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಿನ್ನೆಲೆಯಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಪರಿಣಾಮ ಬೀರುವ ಪ್ರದೇಶಗಳ ಸಂಪೂರ್ಣ ಪಟ್ಟಿ ಇಲ್ಲಿದೆ ಹಾಗೂ ಮಳೆಗಾಲದಲ್ಲಿ ಗ್ರಾಹಕರು ತೆಗೆದು ಕೊಳ್ಳಬೇಕಾದ ವಿದ್ಯುತ್ ಸುರಕ್ಷತಾ ಕ್ರಮಗಳು ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Follow Us Section

ತೀರ್ಥಹಳ್ಳಿ, ಜೂನ್ 21: ತೀರ್ಥಹಳ್ಳಿ ತಾಲೂಕಿನ 110/11 ಕೆವಿ ಕಮ್ಮರಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇದೇ ಬರುವ ಜೂನ್ 24, ಮಂಗಳವಾರದಂದು ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ರವರ ಕಛೇರಿ, ಪಾ ಮತ್ತು ನಿ ಉಪವಿಭಾಗ, ತೀರ್ಥಹಳ್ಳಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದು, ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.

Power Cut: ವಿದ್ಯುತ್ ಕಡಿತದ ವಿವರಗಳು:

  • ದಿನಾಂಕ: 2025ರ ಜೂನ್ 24, ಮಂಗಳವಾರ.
  • ಸಮಯ: ಬೆಳಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ.
  • ಕಾರಣ: 110/11 ಕೆವಿ ಕಮ್ಮರಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಡೆಯುವ ತ್ರೈಮಾಸಿಕ ನಿರ್ವಹಣೆ ಕಾಮಗಾರಿ.

Power Cut: ವಿದ್ಯುತ್ ಸರಬರಾಜು ಇಲ್ಲದ ಪ್ರದೇಶಗಳು:

ಕಮ್ಮರಡಿ, ಕಡೂರು, ಅರೇಹಳ್ಳಿ, ರಾಮಕೃಷ್ಣಪುರ, ಕಾಸರವಳ್ಳಿ, ಹೆಗ್ಗೋಡು, ಹೊಸಳ್ಳಿ, ಕಲ್ಮನೆ, ಕೈಮರ, ಮೇಗರವಳ್ಳಿ, ಶೀರೂರು, ನಾಲೂರು, ಹೊನ್ನೇತಾಳು, ಗುಡ್ಡಕೇರಿ, ಆಗುಂಬೆ, ಹೊಸೂರು, ಬಿದರಗೋಡು, ಹೊಸಗದ್ದೆ ಹಾಗೂ ಈ ಎಲ್ಲಾ ಗ್ರಾಮಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.

ನಿರ್ವಹಣಾ ಕಾಮಗಾರಿಯಿಂದ ಉಂಟಾಗುವ ಅನನುಕೂಲತೆಗಾಗಿ ಮೆಸ್ಕಾಂ ವಿಷಾದ ವ್ಯಕ್ತಪಡಿಸಿದ್ದು, ಸುಗಮ ವಿದ್ಯುತ್ ಸರಬರಾಜಿಗಾಗಿ ಈ ನಿರ್ವಹಣೆ ಅನಿವಾರ್ಯ ಎಂದು ತಿಳಿಸಿದೆ. ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಮೆಸ್ಕಾಂ, ತೀರ್ಥಹಳ್ಳಿ ರವರು ಕೋರಿದ್ದಾರೆ.

ಮಳೆಗಾಲದಲ್ಲಿ ವಿದ್ಯುತ್ ಸುರಕ್ಷತಾ ಕ್ರಮಗಳು:

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ವಿದ್ಯುತ್ ಸಂಬಂಧಿತ ಅಪಾಯಗಳ ಸಂಭವ ಹೆಚ್ಚಾಗುತ್ತದೆ. ಗುಡುಗು ಸಹಿತ ಮಳೆಯು ವಿದ್ಯುತ್ ತಂತಿಗಳ ತುಂಡಾಗಲು, ಕಂಬಗಳ ಮುರಿತಕ್ಕೆ ಮತ್ತು ಉಪಕರಣಗಳಿಗೆ ಹಾನಿಯ ಕಾರಣವಾಗಬಹುದು. ಇಂಥ ಸಂದರ್ಭಗಳಲ್ಲಿ ಸಾರ್ವಜನಿಕರು ಹೆಚ್ಚು ಎಚ್ಚರಿಕೆಯಿಂದಿರುವುದು ಅಗತ್ಯವಿದೆ. ನಿಮ್ಮ ಜೀವ ಹಾಗೂ ಆಸ್ತಿಯ ರಕ್ಷಣೆಗೆ ಮೆಸ್ಕಾಂ (MESCOM) ಸದಾ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ, ಮಳೆಗಾಲದಲ್ಲಿ ನಿಮ್ಮ ಸುರಕ್ಷೆಗೆ ಸಹಾಯ ಮಾಡುವ ಕೆಲವು ಮಹತ್ವದ ಸೂಚನೆಗಳನ್ನು ಪಾಲಿಸಬೇಕಾಗಿ ನಾವು ವಿನಂತಿಸುತ್ತೇವೆ.

ಮಳೆಗಾಲದಲ್ಲಿ ವಿದ್ಯುತ್ ಸುರಕ್ಷತಾ ಕ್ರಮಗಳು

ಮುಖ್ಯ ಮುನ್ನೆಚ್ಚರಿಕೆ ಕ್ರಮಗಳು:

  • ತುಂಡಾಗಿ ಬಿದ್ದ ವಿದ್ಯುತ್ ತಂತಿ ಅಥವಾ ಮುರಿದ ಕಂಬಗಳನ್ನು ಎಂದಿಗೂ ಮುಟ್ಟಬೇಡಿ – ಇದರಿಂದ ವಿದ್ಯುತ್ ಶಾಕ್ ಆಗುವ ಅಪಾಯವಿದೆ.ಅವುಗಳಿಂದ ಎಷ್ಟು ಸಾಧ್ಯವೋ ಅಷ್ಟು ದೂರವಿರಿ, ಮತ್ತು ತಕ್ಷಣವೇ ಮೆಸ್ಕಾಂಗೆ ಮಾಹಿತಿ ನೀಡಿ.
  • ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳಿಗೆ ಜಾನುವಾರುಗಳನ್ನು ಕಟ್ಟಬೇಡಿ – ಅದು ಪ್ರಾಣಾಪಾಯವನ್ನುಂಟುಮಾಡಬಹುದು.
  • ಬಟ್ಟೆ ಒಣಗಿಸಲು ವಿದ್ಯುತ್ ಕಂಬ ಅಥವಾ ತಂತಿಗಳ ಬಳಕೆ ಮಾಡಬೇಡಿ – ಇದು ಅಪಾಯಕಾರಿ.
  • ಕಾನೂನಾತ್ಮಕ ಹಾಗೂ ಅನುಮೋದಿತ ಸಂಪರ್ಕಗಳೇ ಬಳಸಿ – ಅವ್ಯವಸ್ಥಿತ ಸಂಪರ್ಕಗಳು ಅಪಘಾತಗಳಿಗೆ ಕಾರಣವಾಗಬಹುದು.

ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು:

  • 📞 ಗ್ರಾಹಕ ಸೇವಾ ಕೇಂದ್ರ (24/7): ಡಯಲ್ ಮಾಡಿ 1912
  • 📞 ತಕ್ಷಣ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು:
  • 8277883388
  • 0824-2950953
  • 💬 WhatsApp ಮೂಲಕ ದೂರು ನೀಡಲು: 9483041912
  • 📱 “ನನ್ನ ಮೆಸ್ಕಾಂ” ಮೊಬೈಲ್ ಆ್ಯಪ್ ಬಳಸಿ ದೂರು ದಾಖಲಿಸಬಹುದು ಮತ್ತು ಮಾಹಿತಿ ಪಡೆಯಬಹುದು.
MESCOM Caution Notice

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಮೆಸ್ಕಾಂ) ತನ್ನ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಪ್ರಕಟಿಸಿದ್ದು, ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.

ಮಳೆಯ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕದ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ, ಮೆಸ್ಕಾಂ ಎಲ್ಲ ರೀತಿಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಪೂರ್ಣ ಸಿದ್ಧತೆ ಹೊಂದಿದೆ ಎಂಬುದಾಗಿ ಸ್ಪಷ್ಟಪಡಿಸಿದೆ.

👉Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

🔗KUSUM-C Scheme in Karnataka 2025: ನಿಮ್ಮ ಕೃಷಿ ಪಂಪ್‌ಸೆಟ್‌ಗೆ ಸೌರಶಕ್ತಿ ಅಳವಡಿಸಿ, ಉಚಿತ ವಿದ್ಯುತ್ ಪಡೆಯಿರಿ ಮತ್ತು ಲಾಭ ಗಳಿಸಿ!

🔗Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Share and Spread the love

Leave a Reply

Your email address will not be published. Required fields are marked *

ಮುಖಪುಟ ಉದ್ಯೋಗ ಶಿಕ್ಷಣ English Blogs